ಧಾರವಾಡ: “ಡೆಡ್ಲಿ ಅಟ್ಯಾಕ್” ಐವರನ್ನ ವಶಕ್ಕೆ ಪಡೆದು ‘ರಹಸ್ಯ’ ಬಿಚ್ಚಿಟ್ಟ ಪೊಲೀಸ್ ಕಮೀಷನರ್…!!!

ಧಾರವಾಡ: ನಗರದ ಹೊರವಲಯದ ಡೇರಿ ರಸ್ತೆಯಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಐವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮಾಹಿತಿ ನೀಡಿದರು.
ನಾವು ಯಾವುದೇ ಊಹಾಪೋಹಗಳ ಬಗ್ಗೆ ಮಾತನಾಡಲ್ಲ. ತನಿಖೆಯನ್ನ ಎಲ್ಲ ಸ್ತರದಲ್ಲಿ ನಡೆಸಲಾಗುತ್ತಿದ್ದು, ನಮಗೆ ದೊರೆತ ಮಾಹಿತಿಯನ್ನಷ್ಟೇ ಹೇಳಬೇಕಾಗತ್ತೆ ಎಂದರು.
ವೀಡಿಯೋ…
ಗಾಯಾಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ವಶಕ್ಕೆ ತೆಗೆದುಕೊಂಡವರನ್ನ ವಿಚಾರಣೆ ಮಾಡಿ, ನಿಖರವಾದ ಕಾರಣ ತಿಳಿದುಕೊಳ್ಳುತ್ತೇವೆ ಎಂದು ಕಮೀಷನರ್ ಹೇಳಿದರು.