Posts Slider

Karnataka Voice

Latest Kannada News

ಧಾರವಾಡ: ಮನೆಯಲ್ಲೇ ಅಸ್ಥಿಪಂಜರವಾಗಿದ್ದವನನ್ನ ಹುಡುಕಲು “FIR” ಮಾಡಿದ್ದ ಸಂಬಂಧಿಕ…!!!

1 min read
Spread the love

ಧಾರವಾಡ: ಮನೆಯಲ್ಲಿ ಮಲಗಿ‌ದಲೇ ಸಾವಿಗೀಡಾಗಿ ಅಸ್ಥಿಪಂಜರವಾಗಿದ್ದ ವ್ಯಕ್ತಿಯನ್ನ ಹುಡುಕಿ ಕೊಡಿ ಎಂದು ಬಂದಿದ್ದ ಸಂಬಂಧಿಕನ ಜೊತೆಗೆ ತೆರಳಿದ ಪೊಲೀಸರಿಗೆ “ಆತ” ಅಸ್ಥಿಪಂಜರವಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆಯೊಂದು ಧಾರವಾಡದ ಮಾಳಮಡ್ಡಿಯ ಹಳೇ ಕೆನರಾ ಬ್ಯಾಂಕ್ ಬಳಿಯ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ.

ಚಂದ್ರಶೇಖರ ಕೊಲ್ಲಾಪುರ ಎಂಬಾತನೇ ಕಾಣೆಯಾಗಿದ್ದಾನೆ ಎಂದು ಆತನ ಸಂಬಂಧಿಕ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.. ಆಗ ಗೊತ್ತಾಗಿದೆ ರಿಯಾಲಿಟಿ..

ಎಕ್ಸಕ್ಲೂಸಿವ್ ವೀಡಿಯೋ…

ದೂರು ದಾಖಲು ಮಾಡಿಕೊಂಡು ಕಾಣೆಯಾಗಿದ್ದ ವ್ಯಕ್ತಿಯ ಮನೆಗೆ ಪೊಲೀಸರು ಹೋದಾಗ, ಬೀಗ ಹಾಕಿದ್ದು ಕಂಡು ಬಂದಿದೆ. ತಕ್ಷಣವೇ ಸಂಬಂಧಿಕರ ಸಮ್ಮುಖದಲ್ಲಿ ಬೀಗ ತೆಗೆದಾಗ ಮಲಗಿದ್ದಲೇ ಶವವಾಗಿ ಅಸ್ಥಿಪಂಜರವಾಗಿರುವುದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *