Posts Slider

Karnataka Voice

Latest Kannada News

ಧಾರವಾಡ DDPI ಕಚೇರಿಯಲ್ಲಿ “ಮನಿಹೊಡೆಯುತ್ತಿರುವವನ” ಅಧಿಕಾರ ಏನು… ಮಾಡುತ್ತಿರುವುದು ಏನು…!?

1 min read
Spread the love

ಧಾರವಾಡ: ಧಾರವಾಡ ಶಿಕ್ಷಣ ಇಲಾಖೆ ಪ್ರತಿ ದಿನ ಒಂದಿಲ್ಲೊಂದು ಬಾಣಗಾಡಿಗಳನ್ನ ಸೃಷ್ಟಿಸಿ ತನಗೆ ಬೇಡವಾದ ಪ್ರಸಗಂಗಳನ್ನು ತಮ್ಮ ಮೇಲೆ ಎಳೆದು ಕುಖ್ಯಾತಿಗೆ ಒಳಪಡುತ್ತಿರುವುದು ವಿದ್ಯಾಕಾಶಿಯಲ್ಲಿಯ ಪ್ರತಿಯೊಬ್ಬರಿಗೂ ಬೆರಗುಗೊಳಿಸಿದೆ.
ಸರ್ಕಾರ ಎಲ್ಲರಿಗೂ ಶಿಕ್ಷಣ ಸಿಗಲೆಂದು ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಕೆಲ ಭ್ರಷ್ಟ ಅಧಿಕಾರಿಗಳಿಂದ ಲೋಪವಾದಾಗ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದರೆ, ಧಾರವಾಡ ಶಿಕ್ಷಣ ಇಲಾಕೆಯ ಉಪನಿರ್ದೇಶಕರ ಕಛೇರಿಯಲ್ಲೊಬ್ಬ ಅಧಿಕಾರಿ ಅಂಡು ಸುಟ್ಟ ಬೆಕ್ಕಿನ ಹಾಗೆ ಅತ್ತಿಂದಿತ್ತ ಇತ್ತಿಂದತ್ತ ಎನ್ನುವ ಹಾಗೆ ಬರೀ ಮನಿಹೊಡೆಯುವುದರಲ್ಲೇ ಕಾಲಹರಣ ಮಾಡುತ್ತಿದ್ದು ಸರ್ಕಾರ ತನಗೆ ನಿಗದಿ ಪಡಿಸಿದ ಕರ್ತವ್ಯಗಳನ್ನು ಗಾಳಿಗೆ ತೂರಿ ಮನಿಹೊಡೆಯುವದರಲ್ಲೆ ಮಗ್ನನಾಗಿದ್ದಾನೆ ಎನ್ನಲಾಗಿದೆ.


ಈ ಮನಿಹೊಡೆಯು ಅಧಿಕಾರಿಯ ಮೂಲ ಕರ್ತವ್ಯ ಮತ್ತು ಜವಾಬ್ದಾರಿಗಳು ಎನೇಂದರೆ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದ ಗುರಿ ಹೆಚ್ಚುಸುವುದರ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಜಿಲ್ಲಾ ಉಪನಿರ್ದೇಶಕರೊಂದಿಗೆ ಮಹತ್ವದ ನಿರ್ಧಾರಗಳನ್ನು ಕೈಗೊಂಡು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮಾಣಿಕವಾಗಿ ದುಡಿಯಬೇಕಾಗುತ್ತದೆ. ಆದರೆ, ಈತ ಆಡು ಮುಟ್ಟದ ಸೊಪ್ಪಿಲ್ಲ ಇತ ಮಾಡದ ಭಷ್ಟಾಚಾರ ಇಲ್ಲ ಎಂಬಂತೆ ತನಗೆ ನಿರ್ವಹಿಸಿದ ಕಾರ್ಯ ಮಾಡದೆ ಉಪನಿರ್ದೇಶಕರಿಗೆ ದಾರಿ ತಪ್ಪಿಸುವ “ಸನ್ಮಾರ್ಗ”ಗಳನ್ನೆ ತೋರಿಸಿ ಉಪನಿರ್ದೇಶಕರಿಂದ ಹಲವಾರು ಅಕ್ರಮಗಳನ್ನು ಎಸಗಿದ್ದಾನೆಂದು ಆರೋಪಿಸಲಾಗುತ್ತಿದೆ.
“ಇಲ್ಲಿ ಮುಗ್ದರಾರೋ ವಂಚಕರಾರೋ ಎನ್ನುವುದೇ ಮಿಲಿಯನ್ ಡಾಲರ ಪ್ರಶ್ನೆಯಾಗಿದೆ. ಒಂದಂತೂ ಸತ್ಯ ಈ ಮನಿಹೊಡೆದವ ಎಲ್ಲ ಅಕ್ರಮಗಳನ್ನು ಮೇಲಾಧಿಕಾರಿಗಳಿಂದ ಮಾಡಿಸಿ, ನಂತರ ಅವರೇನಾದರೂ ತಪ್ಪಿನಲ್ಲಿ ಸಿಕ್ಕಿಹಾಕಿಕೊಂಡರೆ, ಅವರನ್ನೆ ಅವಹೇಳನ ಮಾಡುತ್ತಾ ಅವರನ್ನು ಕುಹಕ ಮಾಡುತ್ತಾ “ನೋಡ್ ಅವನಿಗ ಹ್ಯಾಂಗ್ ಬಾಂಬೆ ತೊರಸಿದ್ಯಾ” ಎಂದು ಕಿಸ್ ಎಂದು ತನ್ನ ಚಾರ್ಲಿ ಚಾಪ್ಲಿನ್ ಮುಖದಲ್ಲಿ ಹಲ್ಲು ಕಿಸಿಯುತ್ತಾನೆ ಎಂದು ಉಪನಿರ್ದೇಶಕರ ಕಛೇರಿಯ ನೊಂದ ಮಹಿಳಾ ನೌಕರೊಬ್ಬರು ತಮ್ಮ ಅಳಲು ತೊಡಿಕೊಳ್ಳುತ್ತಾರೆ.
ಈಗಾಗಲೆ ಈ ಅಧಿಕಾರಿ ಹುಬ್ಬಳ್ಳಿಯಲ್ಲಿ ಬಿಇಓ ಇದ್ದಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಅನುಭವಿಸಿದ ಅನುಭವ ಹೊಂದಿದ್ದು, ಈತನ ಬಗ್ಗೆ ಮೇಲಾಧಿಕಾರಿಗಳು ಹೆಚ್ಚು ಜಾಗರೂಕರಾಗಿರುವುದು ಅತೀ ಅವಶ್ಯ. ಇಲ್ಲದಿದ್ದಲ್ಲಿ ಅವರನ್ನೂ ಜೈಲಿಗಟ್ಟುವ ಎಲ್ಲ ಚಾಕಾಚಕ್ಯತೆ  ಈತನ್ನಲ್ಲಿದೆ ಎಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *