SSLC ಫಲಿತಾಂಶ ಕಡಿಮೆಯಾಗಲು “CCTV” ಕಾರಣ: ವೈರಲ್ ಆಗ್ತಿದೆ ಧಾರವಾಡ ಡಿಡಿಪಿಐ ಹೇಳಿಕೆ…!!!

ಧಾರವಾಡ: ಹತ್ತನೇ ವರ್ಗದ ಫಲಿತಾಂಶ ಕಡಿಮೆಯಾಗಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದು ಕೂಡಾ ಕಾರಣವಾಗಿದೆ ಎಂದು ಹೇಳಿಕೆ ನೀಡಿರುವ ಪತ್ರಿಕೆಯ ತುಣುಕೊಂದು ವೈರಲ್ ಆಗಿದ್ದು, ಡಿಡಿಪಿಐ ಅವರು ಸಾರ್ವಜನಿಕ ವಲಯದಲ್ಲಿ ನಗೆಪಾಟೀಲಿಗೀಡಾಗುವ ಸ್ಥಿತಿ ಬಂದೊದಗಿದೆ.
ಪತ್ರಿಕೆಯ ಪ್ರತಿ..
ಮುಂದಿನ ವರ್ಷ ಅವರು ಸುಧಾರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಫಲಿತಾಂಶದ ವರದಿಯನ್ನ ಅವರೇ ನೀಡಿದ್ದು ಇಲ್ಲಿದೆ..
ವೀಡಿಯೋ…
ಧಾರವಾಡ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಪ್ರಜ್ಞಾವಂತರು ಅತೀವ ಜ್ಞಾನವಂತರು ಇರುವುದು ಈ ಮೂಲಕ ಮತ್ತೆ ಸಾಬೀತಾಗಿದೆ. ಮುಂಬರುವ ಪರೀಕ್ಷೆಗಳ ಸಮಯದಲ್ಲಿ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮಾಡದಂತೆಯೂ, ಫಲಿತಾಂಶ ಉತ್ತಮಗೊಳಿಸಲು ಪ್ರಯತ್ನ ಪಡುವುದಾಗಿಯೂ ಸರಕಾರಕ್ಕೆ ಪತ್ರ ಬರೆಯುತ್ತಾರಾ ಎಂಬುದು ಈಗ ಉಳಿದಿರುವ ಯಕ್ಷಪ್ರಶ್ನೆ.