Posts Slider

Karnataka Voice

Latest Kannada News

ಧಾರವಾಡ “ಡಿಡಿಪಿಐ ಹಗರಣ”- ಸೋಮವಾರ ರಾಷ್ಟ್ರೀಯ ಹೆದ್ದಾರಿ ಬಂದ್…!

1 min read
Spread the love

ಹುಬ್ಬಳ್ಳಿ: ತಾಲೂಕಿನ ಮಂಟೂರ ಅನುದಾನಿತ ಶಾಲೆಗೆ ಕಾನೂನು ಬಾಹಿರ್ ಚಟುವಟಿಕೆ ಮೂಲಕ ಅನುದಾನ ನೀಡಲು ಧಾರವಾಡ ಜಿಲ್ಲೆಯ ಡಿಡಿಪಿಐ ಪರವಾನಿಗೆ ನೀಡಿದ್ದಾರೆಂದು ಆರೋಪಿಸಿ, ಮೂರು ಗ್ರಾಮದ ಗ್ರಾಮಸ್ಥರು ಸೋಮವಾರ ರಸ್ತೆ ತಡೆ ನಡೆಸಲು ನಿರ್ಧರಿಸಿದ್ದಾರೆ.

ಧಾರವಾಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಮಂಟೂರ ಶಾಲೆಯಲ್ಲಿ ನಡೆದ ಮತ್ತೂ ನಡೆಯುತ್ತಿರುವ ಹಗರಣ ಗೊತ್ತಿದ್ದರೂ ಅನುದಾನ ಬಿಡುಗಡೆ ಮಾಡಿಸಲು ಅಂಕಿತ ಹಾಕಿದ್ದಾರೆ. ಪತ್ರಿಕೆಯನ್ನೇ ನಕಲಿ ಮಾಡಿರುವುದು ದೃಡಪಟ್ಟರೂ, ಡಿಡಿಪಿಐ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.

ಸೋಮವಾರ ರಾಷ್ಟ್ರೀಯ ಹೆದ್ದಾರಿಯನ್ನ ಬಂದ್ ಮಾಡಿ, ಡಿಡಿಪಿಐ ಕೆಳದಿಮಠ ಅವರ ಬಣ್ಣವನ್ನ ಬಯಲು ಮಾಡುವುದಾಗಿ ಹೇಳಿರುವ ಗ್ರಾಮಸ್ಥರು, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲವೆಂದು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *