ಧಾರವಾಡ DDPIಗೆ ತುಂಬಿದ ಸಭೆಯಲ್ಲಿ “A1 ಆರೋಪಿ ಮಾಡಬೇಕಾಗತ್ತೆ” ಎಂದ DC: ಸಚಿವ ಲಾಡ್, Mlc ಸಲೀಂ ಅಹ್ಮದರಿಂದಲೂ ತರಾಟೆ….!!!

ಧಾರವಾಡ: ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾದರೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಜೊತೆಗೆ ಪ್ರಮುಖ ಆರೋಪಿಯನ್ನ ನಿಮ್ಮನ್ನೇ ಮಾಡಲಾಗುವುದೆಂದು ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದರು.
ಮಾಹಿತಿ ಕೇಳಿದರೇ ಪ್ರತಿ ಬಾರಿಯೂ ಒಂದೊಂದು ಕೊಡ್ತೀರಿ. ಶಾಲೆಯಲ್ಲಿ ಮಕ್ಕಳಿಗೆ ಏನೇ ತೊಂದರೆ ಆದರೂ, ಪ್ರಕರಣ ದಾಖಲಾಗತ್ತೆ ಎಂದರು.
Exclusive Video…
ಸಚಿವ ಸಂತೋಷ ಲಾಡ್ ಅವರಿಗಂತೂ ಡಿಡಿಪಿಐ ವರ್ತನೆ ಸಾಕಾಗಿ ಹೋದವರಂತೆ ಕಂಡು ಬಂದಿತು. ಸಭೆಯಲ್ಲಿದ್ದ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ ಅವರು ಕೂಡಾ, ಈಗಲೇ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗೆ ಹೇಳಿದರು.
ಮೂರು ವರ್ಷದಿಂದ ಇದ್ದರೂ ಮೂರು ಕಿಲೋಮೀಟರ್ ದೂರ ಇರೋ ಶಾಲೆ ಸೋರುವುದನ್ನ ನಿಲ್ಲಿಸೋಕೆ ಆಗಿಲ್ವಾ ನಿನಗೆ ಎಂದು ಸಚಿವರು ಬೇಸರಿಸಿದರು.