ಧಾರವಾಡದ “ಜಿಲ್ಲಾಧಿಕಾರಿ ಯಾರೂ”- DDPI ಕೆಳದಿಮಠ ಅವರೇ ನಿಮ್ಮ ಶ್ರಮ ಗಮನಿಸಿ…!!!!
1 min readಧಾರವಾಡ: ವಿದ್ಯಾಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಧಾರವಾಡ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆ ಯಾವ ಮಟ್ಟಕ್ಕೆ ಇದೆ ಎಂಬುದರ ಬಗ್ಗೆ ಕರ್ನಾಟಕವಾಯ್ಸ್.ಕಾಂ ಸಣ್ಣದೊಂದು ರಿಯಾಲಿಟಿ ಚೆಕ್ ನಡೆಸಿದ್ದು, ಅಚ್ಚರಿ ಪಡುವ ಸ್ಥಿತಿಯಿದೆ.
ಮೊದಲು ಈ ಒಂದು ನಿಮಿಷದ ವೀಡಿಯೋ ನೋಡಿಬಿಡಿ…
ಸಾಮಾನ್ಯ ಜ್ಞಾನವನ್ನ ಕೊಡದ ಸ್ಥಿತಿ ಶಾಲೆಯಲ್ಲಿ ಹೆಚ್ಚಾಗಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಧಾರವಾಡ ಜಿಲ್ಲೆಯಲ್ಲಿ ನಿರಂತರ ಶ್ರಮ ವಹಿಸಿ, ಶೈಕ್ಷಣಿಕವಾಗಿ ಬೆಳೆಸಲು ಕನಸು ಕಾಣುತ್ತಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಹೆಸರು ಯಾರಿಗೂ ಗೊತ್ತೆ ಇಲ್ಲ.
ಶಾಲೆಗಳಲ್ಲಿ ಸಾಮಾನ್ಯ ಜ್ಞಾನವನ್ನ ಕೊಡಬೇಕಾದವರು ಯಾರೂ.. ಬೋರ್ಡಗಳಲ್ಲಿಯಾದರೂ ನಮ್ಮ ಜಿಲ್ಲೆಯ ವಿವರ ಹಾಕದ ವ್ಯವಸ್ಥೆ ಬೇಕಾ.. ಡಿಡಿಪಿಐ ಕೆಳದಿಮಠ ಅವರೇ, ಆರ್.ಎನ್.ಶೆಟ್ಟಿ ಮೈದಾನಕ್ಕೆ ಬಂದು ಸಹಿ ಮಾಡಿ ಹೋಗುವುದಿದೆ ಎಂದು ವದಂತಿ ಹಬ್ಬಿಸಿ, ಗ್ರೌಂಡ್ ತುಂಬಿಸುವುದಲ್ಲ. ಅಲ್ಲಿ ಕಾಣುವ ಗಣ್ಯರು ಯಾರೂ ಎಂಬುದು ಗೊತ್ತು ಮಾಡುವ ಕೆಲಸ ಆಗಬೇಕಿದೆ.
ದೇವರು ಅವರಿಗೆ ಬೇಗನೇ ಸದ್ಭುದ್ದಿ ನೀಡಿ ವಿದ್ಯಾಕಾಶಿಯ ಗೌರವ ಹೆಚ್ಚಾಗುವಂತೆ ಮಾಡಲಿ.