Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಹೊಟೇಲ್, ಮದ್ಯದಂಗಡಿಗೆ ಗ್ರೀನ್ ಸಿಗ್ನಲ್…!

Spread the love

ಜೂನ್ 1 ರಿಂದ 6 ರವರೆಗೆ ಬೆಳಿಗ್ಗೆ 6 ರಿಂದ 8 ರವರೆಗೆ ಹೋಟೆಲ್ ಪಾರ್ಸೆಲ್,ಹೋಂ ಡೆಲೆವರಿ ಹಾಗೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿ ಧಾರವಾಡ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರ ಆದೇಶ.

ಹೋಟಲ್‌ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ಕಲ್ಪಿಸಲು ಮನವಿ

ಹುಬ್ಬಳ್ಳಿ. (ಕರ್ನಾಟಕ ವಾರ್ತೆ).ಮೇ.30: ಕೋವಿಡ್ ಲಾಕ್‌ಡೌನ್ ನಡುವೆ ಹೋಟೆಲ್ ಉದ್ದಿಮೆ ನಷ್ಟ ಅನುಭವಿಸುತ್ತಿದೆ. ಹೋಟೆಲ್‌ಗಳು ಬಂದ್ ಇರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಆದ್ದರಿಂದ ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡುವಂತೆ ಹುಬ್ಬಳ್ಳಿ ಹೋಟೆಲ್ ಸಂಘದ ಸದಸ್ಯರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಸ್ವೀಗಿ ಹಾಗೂ ಜೂಮ್ಯಾಟೋ‌ ಸೇರಿದಂತೆ ಹಲವು ಪಾರ್ಸಲ್ ಸೇವೆಗಳಿಗೆ ಹೋಮ್ ಡಿಲೆವರಿ ಮಾಡಲು ಬೆಳಿಗ್ಗೆ 6 ರಿಂದ ಸಂಜೆ 4 ಗಂಟೆ ವರೆಗೆ ಅವಕಾಶ ನೀಡಬೇಕು. ಬೆಳ್ಳಿಗೆ 6 ರಿಂದ 10 ರವರೆಗೆ ಸಾರ್ವಜನಿಕರು‌ ಹೋಟೆಲ್‌ಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸಂಘದ ಸದಸ್ಯರು ಸಚಿವರಲ್ಲಿ ಕೋರಿಕೊಂಡರು.

ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ ಸಚಿವ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಪಾರ್ಸಲ್ ಸೇವೆ ಅವಕಾಶ ಮಾಡಿಕೊಡುವುದಾಗಿ ಹಾಗೂ ಲಾಕ್ ಡೌನ್ ನಿಯಮಗಳಲ್ಲಿ ಹೋಟೆಲ್ ಉದ್ದಿಮೆಗಳಿಗೆ ವಿನಾಯಿತಿ ನೀಡುವುದಾಗಿ ಭರವಸೆ ನೀಡದರು.

ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಹೋಟೆಲ್ ಸಂಘದ ಸದಸ್ಯರಾದ ರವಿ ಗಾಯತೋಂಡೆ, ಎ ಪಿ ಐತಾಳ್, ಸರ್ವೋತ್ತಮ ಶೆಟ್ಟಿ ಶ್ರೀನಿವಾಸ ಓಕೋಡ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *