Posts Slider

Karnataka Voice

Latest Kannada News

ಧಾರವಾಡದ ಮಾಳಮಡ್ಡಿಯಲ್ಲಿ ಡಾ.ಆನಂದ ಕಬ್ಬೂರ ಮನೆಗೆ ನುಗ್ಗಿ ಹಾಡುಹಗಲೇ ದರೋಡೆ… ಹತ್ಯೆ ಯತ್ನ…!!!!

Spread the love

ಧಾರವಾಡ: ಮನೆಯಲ್ಲಿ ಮಾಲೀಕರು ಇದ್ದಾಗಲೇ ಹಾಡುಹಗಲೇ ಒಳನುಗ್ಗಿ ಮಹಿಳೆಯ ಕುತ್ತಿಗೆಗೆ ಬಿಗಿದು ದರೋಡೆ ಮಾಡಿರುವ ಪ್ರಕರಣ ಮಾಳಮಡ್ಡಿಯಲ್ಲಿ ನಡೆದಿದ್ದು, ಮಹಿಳೆಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿರುವ ಡಾ‌.ಆನಂದ ಕಬ್ಬೂರ ಎಂಬುವವರ ನಿವಾಸದಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಒಬ್ಬರೇ ಇದ್ದ ಪತ್ನಿ ವಿನೋದಿನಿಯವರನ್ನ ಥಳಿಸಿ, ದರೋಡೆ ಮಾಡಲಾಗಿದೆ.

ವೀಡಿಯೋ….

ಮನೆಯ ಸಿಸಿ ಕ್ಯಾಮರಾ ಡಿವಿಆರ್ ಜೊತೆಗೆ ಮಾಂಗಲ್ಯ ಮತ್ತು ಅಂದಾಜು 25 ಸಾವಿರ ನಗದು ದೋಚಲಾಗಿದೆ. ನಗರದ ಪ್ರತಿಷ್ಠಿತ ಹಿರಿಯ ವೈದ್ಯರಾಗಿರೋ ಡಾ‌. ಆನಂದ ಅವರ ನಿವಾಸದಲ್ಲಿ ನಡೆದಿರುವ ಘಟನೆಯಿಂದ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.


Spread the love

Leave a Reply

Your email address will not be published. Required fields are marked *