ಧಾರವಾಡದಲ್ಲಿ ಗುತ್ತಿಗೆದಾರನ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ “ದೃಶ್ಯಂ”- Exclusive

ಧಾರವಾಡ: ಮಹಾನಗರದ ಕಲಾಭವನದ ಆವರಣದಲ್ಲಿ ಗುತ್ತಿಗೆದಾರನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕರ್ನಾಟಕವಾಯ್ಸ್.ಕಾಂ ಅವು ದೊರಕಿವೆ.
ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುವ ಅಜೀಜ ಎಂಬುವರು ಬೈಕಿನಲ್ಲಿ ನಿಂತಾಗ, ಹಿಂದಿನಿಂದ ಬಂದು ಬಡಿಗೆಯಿಂದ ಮಾರಣಾಂತಿಕವಾಗಿ ಹೊಡೆಯಲಾಗಿದೆ. ಇಡೀ ದೃಶ್ಯಾವಳಿಗಳು ಇಲ್ಲಿವೆ ನೋಡಿ.
ಘಟನೆಯಲ್ಲಿ ಗಾಯಗೊಂಡಿರುವ ಅಜೀಜ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.