ಧಾರವಾಡ ಜಿಲ್ಲೆಯಲ್ಲಿ “ಗಲಿಬಿಲಿ ಕಮಲ”- ಪ್ರದೀಪ ಶೆಟ್ಟರ್ನ್ನ ಮರೆತ್ತಿದ್ದರಂತೆ ಕುಂದಗೋಳಮಠ….!!!!

ಹುಬ್ಬಳ್ಳಿ: ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರನ್ನ ಕಾರ್ಯಕ್ರಮಕ್ಕೆ ಕರೆಯುವಾಗ ಒತ್ತಡದಲ್ಲಿ ಮರೆತಿದ್ದೇನೆ. ಇದಕ್ಕೆ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ. ಆದರೆ, ಬಾಲಿಶ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ಪ್ರಕಟಣೆ ಮೂಲಕ ಹೇಳಿದ್ದು, ನಾಳೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರನ್ನ ಗ್ರಾಮ ಪಂಚಾಯತಿ ಸದಸ್ಯರ ಸತ್ಕಾರ ಸಮಾರಂಭದಲ್ಲಿ ಕರೆಯದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರದೀಪ ಶೆಟ್ಟರ್, ಬಿಜೆಪಿಯಲ್ಲಿ ಲಿಂಗಾಯತರನ್ನ ಕಡೆಗಣಿಸಲಾಗುತ್ತಿದೆ ಎಂದು ಹೇಳಿದ್ದರು.
ಈ ಹೇಳಿಕೆ ಬಗ್ಗೆ ಪ್ರಕಟಣೆ ನೀಡಿರುವ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರು, ಬಿಜೆಪಿ ಲಿಂಗಾಯತರಿಗೆ ಟಿಕೆಟ್ ನೀಡಿದೆ. ಜಗದೀಶ ಶೆಟ್ಟರ್ ಕೂಡಾ ಪಕ್ಷದ ಚಿನ್ಹೆಯಿಂದಲೇ ಗೆದ್ದು ಬಂದಿದ್ದೆಂದು, ಶೆಟ್ಟರ ಕುಟುಂಬವನ್ನ ವಿವಾದದಲ್ಲಿ ತಂದಿದ್ದಾರೆ. ನಾಳೆ ಪತ್ರಿಕಾಗೋಷ್ಠಿ ನಡೆಯಲಿದ್ದು, ಪಕ್ಷದ ಗಲಿಬಿಲಿ ದಿನೇ ದಿನೇ ಹೆಚ್ಚಾಗುತ್ತಿದೆ.