Posts Slider

Karnataka Voice

Latest Kannada News

ಧಾರವಾಡದ ವಿಶಾಲ್ ಮಾರ್ಟ್ ಬಳಿ ಆಟೋ ಪಲ್ಟಿ, ಚಾಲಕ ಸ್ಥಳದಲ್ಲೇ ದುರ್ಮರಣ…!

1 min read
Spread the love

ಧಾರವಾಡ: ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಎದುರಿನ ವಿಶಾಲ್ ಮಾರ್ಟ್ ಬಳಿ ಆಟೋವೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ತಡರಾತ್ರಿ ಸಂಭವಿಸಿದೆ.

ಮೃತ ಚಾಲಕನನ್ನ ಹತ್ತಿಕೊಳ್ಳ ಮೈಲಾರಲಿಂಗನಗರದ 48 ವರ್ಷದ ಸಂಜೀವ ಶಿಂಧೆ ಎಂದು ಗುರುತಿಸಲಾಗಿದೆ. ಆಟೋ ಪಲ್ಟಿಯಾದ ಸಮಯದಲ್ಲಿ, ತೀವ್ರವಾದ ರಕ್ತಸ್ರಾವವಾಗಿದೆ.

ಮಾಹಿತಿ ಆಧರಿಸಿದ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ಶವವನ್ನ ಆಸ್ಪತ್ರೆಗೆ ರವಾನಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed