Posts Slider

Karnataka Voice

Latest Kannada News

ಧಾರವಾಡ ಸಂಪಿಗೆನಗರದ ಅಪಘಾತ- ಸತ್ತವರ ಸಂಖ್ಯೆ 3ಕ್ಕೇರಿಕೆ… ಮತ್ತೊಂದು ಮಗುವಿನ ಸ್ಥಿತಿ ಗಂಭೀರ…!!!

Spread the love

ಧಾರವಾಡ: ಆಟೋರಿಕ್ಷಾಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದ್ದು, ಸ್ಥಳೀಯರು ಕೆಲಗೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.

ಬೆಳಗಿನ ನಡೆದ ಅಪಘಾತದಲ್ಲಿ ಆಟೋಚಾಲಕ ಮಾರುತಿ ದುರ್ಗಪ್ಪ ಹಂಚಿನಮನಿ, ಮರೆವ್ವ ನಿಂಗಪ್ಪ ಹಂಚಿನಮನಿ ಸಾವಿಗೀಡಾಗಿದ್ದು, ತದನಂತರ ಚಿಕಿತ್ಸೆ ಫಲಿಸದೇ ಪ್ರಣವ ರವಿ ಹಂಚಿನಮನಿ ಎಂಬ ಆರು ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ.

ಹೋರಾಟದ ವೀಡಿಯೋ… ಪೂರ್ಣವಾಗಿ ನೋಡಿ

ಘಟನೆಯಲ್ಲಿ ಗಾಯಗೊಂಡಿರುವ ಇನ್ನೊಂದು ಮಗುವಿನ ಸ್ಥಿತಿಯೂ ಚಿಂತಾಜನಕವಾಗಿದೆ. ಪ್ರಕರಣದಿಂದ ರೋಸಿ ಹೋದ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಶಾಸಕ ಅರವಿಂದ ಬೆಲ್ಲದ್ ಸ್ಥಳಕ್ಕೆ ಆಗಮಿಸಿ, ಜನರ ಸಮಸ್ಯೆಗೆ ಸ್ಪಂಧಿಸುವ ಭರವಸೆ ನೀಡಿದರು. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಕೂಡ ಆಗಮಿಸಿದ್ದರು.


Spread the love

Leave a Reply

Your email address will not be published. Required fields are marked *