ಧಾರವಾಡದಲ್ಲಿ ಸರಣಿ ಅಪಘಾತ- ಪ್ರಶಾಂತ ದುರ್ಮರಣ, ಇಬ್ಬರಿಗೆ ಗಾಯ…!!!

ಧಾರವಾಡ: ತೇಜಸ್ವಿನಗರದ ಸಾಗರ ಹೊಟೇಲ್ ಬಳಿ ಸರಣಿ ಅಪಘಾತ ನಡೆದಿದ್ದು, ಸ್ಥಳದಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡ ಘಟನೆ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿದೆ.
ಟಾಟಾ ಏಸ್ ವಾಹನವೂ ಕಾರು ಮತ್ತು ಬೈಕಿಗೆ ಡಿಕ್ಕಿ ಹೊಡೆದಿದೆ. ಸಂಗೊಳ್ಳಿ ರಾಯಣ್ಣ ನಗರದ ಪ್ರಶಾಂತ ಎಂಬಾತ ಸಾವಿಗೀಡಾಗಿದ್ದು, ಗಾಯಾಳುಗಳ ಮಾಹಿತಿ ಸಿಗಬೇಕಿದೆ.
ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.