ಹತ್ಯೆಯಾದ ಧರ್ಮದರ್ಶಿ ದೇವಪ್ಪಜ್ಜನ ಬಗ್ಗೆ ನಿಮಗೆಷ್ಟು ಗೊತ್ತು…!? ಕುಸುಗಲ್ ಟು ಹುಬ್ಬಳ್ಳಿ ಈಶ್ವರನಗರ…!!!!

ಹುಬ್ಬಳ್ಳಿ: ಕೆಲವೇ ಸಮಯದ ಹಿಂದೆ ಹತ್ಯೆಗೊಳಗಾದ ಶ್ರೀ ವೈಷ್ಣೋದೇವಿ ಮಂದಿರದ ಧರ್ಮದರ್ಶಿಯಾಗಿದ್ದ ಶ್ರೀ ದೇವಪ್ಪಜ್ಜ ಹೊನ್ನಳ್ಳಿಯವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಮಾಹಿತಿ ಕರ್ನಾಟಕವಾಯ್ಸ್.ಕಾಂ ಲಭಿಸಿದೆ.
ಮೊದಲು ಈ ವೀಡಿಯೋ ನೋಡಿ…
ದೇವಪ್ಪ ಹೊನ್ನಳ್ಳಿ ದೇವಪ್ಪಜ್ಜನಾಗಿ ಬದಲಾಗಿದ್ದು ಇತಿಹಾಸ. ಮೂವರು ಮಕ್ಕಳ ಪೈಕಿ ಇವರೊಬ್ಬರೆ ಗಂಡು ಮಗುವಾಗಿದ್ದರು. ಕುಸುಗಲ್ ಗ್ರಾಮದಲ್ಲಿ ಮಂದಿರವನ್ನ ಕಟ್ಟಿ ಕೊಲ್ಕತ್ತಾದಿಂದ ಮೂರ್ತಿಯನ್ನ ತಂದಿದ್ದರು. ಆದರೆ, ಕೆಲವರು ವಿರೋಧ ಮಾಡಿದ್ದರಿಂದ ಈಶ್ವರನಗದತ್ತ ಹೊರಟು ನಿಂತಿದ್ದರು. ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗುವನ್ನ ಹೊಂದಿರುವ ದೇವಪ್ಪಜ್ಜನಿಗೆ ಅಪಾರವಾದ ಭಕ್ತ ಸಮೂಹಯಿತ್ತು.