Posts Slider

Karnataka Voice

Latest Kannada News

ದೀಪಾವಳಿ ಆಚರಣೆ ಏಕೆ… ಮೊದಲ ದೀಪ ಹಚ್ಚಿದ್ದು ಎಲ್ಲಿ… ವಿಶೇಷ ಮಾಹಿತಿ…

Spread the love

ಕ್ಯಾಸನೂರು ಅಡಿಕೆ ಹಾಳೆಯಲ್ಲಿ ಮಾಡಿದ ಕೆಂಬೋತಿ ದೀಪಗಳಿಂದ ಮೊಟ್ಟ ಮೊದಲು ದೀಪಾವಳಿ ಆಚರಣೆ ಹುಟ್ಟಿಕೊಂಡಿತು

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.

ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ದೀಪಾವಳಿಗೆ (Diwali) ಸಾಕಷ್ಟು ಕಥೆಗಳಿವೆ. ಪೂರ್ವಜರು ದೀಪಾವಳಿಯನ್ನು (deepavali) ಬೆಂಕಿಯ ಬೆಳಕು ಎಂದು ಕರೆಯುತ್ತಾರೆ. ಇದು ಕೆಟ್ಟದ್ದರ ನಾಶ ಮತ್ತು ಒಳ್ಳೆಯದ ಹುಟ್ಟು ಎನ್ನಲಾಗಿದೆ. ಬೆಳಕು (light) ವಿಜಯದ ಸಂಕೇತವಾಗಿದೆ. ಕತ್ತಲೆ(Darkness) ಎಂದರೆ ವೈಫಲ್ಯ ಎಂದು ಅರ್ಥ.

ದೀಪಾವಳಿಯ ದಿನದಂದು ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಹಾಗೂ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಂತೋಷದ ಹರಿವು ಇರುತ್ತದೆ ಎಂದು ನಂಬಲಾಗಿದೆ.

ದೀಪಗಳು, ಮೇಣದಬತ್ತಿಗಳನ್ನು ಮನೆಯ ಒಳಗೆ ಹೊರಗು ಹಚ್ಚಿ ಅಂದಕಾರ ಹೋಗಲಾಡಿಸಲು ಪ್ರಾರ್ಥಿಸಲಾಗುವುದು. ಈ ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳ ಮೊದಲೇ ತಯಾರಿ ಶುರುವಾಗುತ್ತದೆ.

ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಶುಚಿತ್ವ ಇದ್ದಲ್ಲಿ ಮಾತ್ರ ಲಕ್ಷ್ಮಿ ನೆಲೆಯೂರುತ್ತಾಳೆ ಎಂಬ ನಂಬಿಕೆ ಇರುವ ಹಿನ್ನಲೆ ಇದಕ್ಕಾಗಿ ಮನೆ, ಮನ ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಯುತ್ತದೆ.

ದೀಪಾವಳಿಯ ಪೂಜೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ಮಣ್ಣಿನ ಲಕ್ಷ್ಮಿ-ಗಣೇಶನನ್ನು ಖರೀದಿಸುತ್ತಾರೆ. ದೀಪಾವಳಿ ಪೂಜೆಯು ಕೆಲವು ವಸ್ತುಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ

ಅಂತಹ ಪರಿಸ್ಥಿತಿಯಲ್ಲಿ, ಕೊನೆಯ ಕ್ಷಣದಲ್ಲಿ ಯಾವುದೇ ಆತುರವಾಗದಂತೆ, ಪೂಜೆ ಅಪೂರ್ಣವಾಗಿ ಉಳಿಯದಂತೆ ಪೂಜೆಯಲ್ಲಿ ಬಳಸುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸುವುದು ಉತ್ತಮ.

ಪುರಾಣಗಳ ಪ್ರಕಾರ, ಶ್ರೀರಾಮನು ತ್ರೇತಾಯುಗದಲ್ಲಿ ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಹಿಂದಿರುಗಿದಾಗ, ಅಲ್ಲಿನ ಜನರು ದೀಪವನ್ನು ಬೆಳಗಿಸಿ ಸ್ವಾಗತಿಸಿದರು. ಪ್ರತಿ ವರ್ಷ ಜನರು ಈ ಸ್ವಾಗತವನ್ನು ದೀಪಾವಳಿಯ ಹಬ್ಬವೆಂದು ಆಚರಿಸುತ್ತಾರೆ.

ದೀಪಾವಳಿಯ ದಿನದಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ಮನೆಯ ಮುಂಭಾಗಿಲಿನಲ್ಲಿ ರಂಗೋಲಿ ಹಾಕುತ್ತಾರೆ. ಇದರೊಂದಿಗೆ ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಲಾಗುತ್ತದೆ

 

 


Spread the love

Leave a Reply

Your email address will not be published. Required fields are marked *