ಆರೋಪಿತ ಮಹಿಳೆಯ ಬಗ್ಗೆ ದೀಪಾ ಗೌರಿ ಹೇಳಿದ್ದೇನು…!?

ಹುಬ್ಬಳ್ಳಿ: ಲೋನ್ ಹಾಗೂ ಪ್ಲ್ಯಾಟ್ ಕೊಡುವುದಾಗಿ ಜನರಿಂದ ಹಣ ಪಡೆದು ವಂಚನೆ ಮಾಡಿರುವ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯ ಬಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಜಿಲ್ಲಾಧ್ಯಕ್ಷೆ ದೀಪಾ ನಾಗರಾಜ ಗೌರಿ ಸ್ಷಷ್ಟನೆಯನ್ನ ನೀಡಿದ್ದಾರೆ.

ಸ್ಪಷ್ಟನೆ ಹೀಗಿದೆ ನೋಡಿ…
ಮಾಧ್ಯಮ ಮಿತ್ರರಿಗೆ ಸ್ಪಷ್ಟೀಕರಣ
ಮಾನ್ಯರೆ,
ನಾನು ಶ್ರೀಮತಿ ದೀಪಾ ನಾಗರಾಜ್ ಗೌರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷಿಣಿಯಾಗಿದ್ದು, ಪೂರ್ಣಿಮಾ ಸೌದತ್ತಿ ಎಂಬುವರ ಜೊತೆಗೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತೆಯೊಂದಿಗಿ ನ ಸಂಬಂಧದ ಹೊರತಾಗಿ ಅವರೊಡನೆ ಯಾವುದೇ ತರಹದ ವೈಯಕ್ತಿಕವಾದ ಅಥವಾ ವ್ಯವಹಾರಿಕವಾದ ಸಂಬಂಧವನ್ನು ಹೊಂದಿರುವುದಿಲ್ಲ. ಆದ್ದರಿಂದ ವಿನಾಕಾರಣ ನನ್ನ ಹೆಸರನ್ನು ಅವರೊಡನೆ ತಳಕು ಹಾಕಬಾರದೆಂದು ತಮ್ಮಲ್ಲಿ ಕಳಕಳಿಯ ಮನವಿ????.
ಅಧ್ಯಕ್ಷರು
ಶ್ರೀಮತಿ ದೀಪಾ ನಾಗರಾಜ್ ಗೌರಿ
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ