ಹುಬ್ಬಳ್ಳಿ ಪೊಲೀಸರ ‘ಚಾಣಕ್ಯ ನಡೆ”- ಹೊರಬಿತ್ತು ರಸ್ತೆಯಲ್ಲಿ ಸಿಕ್ಕ ಹೆಣದ ರಹಸ್ಯ…!

ಹುಬ್ಬಳ್ಳಿ: ಲಾಕ್ ಡೌನ್ ವೇಳೆಯಲ್ಲಿ ಪೊಲೀಸರು ಬಿಜಿಯಿದ್ದಾರೆ ಎಂದುಕೊಂಡ ಆಸಾಮಿಯೋರ್ವ ತಾನು ಮಾಡಿದ ಯಡವಟ್ಟಿನಿಂದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದನ್ನ ಮುಚ್ಚಿಕೊಂಡು ಅಲೆದಾಡುತ್ತಿದ್ದವನನ್ನ ಪೊಲೀಸರು ಚಾಣಕ್ಯನ ತಂತ್ರದ ಮೂಲಕ ಕಂಡು ಹಿಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗದಗ ರಸ್ತೆಯಲ್ಲಿ ಜೂನ್ 8ರಂದು ರಾತ್ರಿ ರೋಣ ತಾಲೂಕಿನ ರಾಜು ರಾಠೋಡ ಎನ್ನುವವರ ದೇಹ ಶವವಾಗಿ ದೊರಕಿತ್ತು. ತಲೆಗೆ ಬಲವಾದ ಪೆಟ್ಟು ಕೂಡಾ ಬಿದ್ದಿತ್ತು. ಹೀಗಾಗಿ ಇದು ಕೊಲೆಯಾ ಎಂದು ಸಂಶಯಕ್ಕೆ ಕಾರಣವಾಗಿತ್ತಾದರೂ, ಪೊಲೀಸರು ನಡೆಸಿದ ತನಿಖೆಯಲ್ಲಿ ಬೇರೆಯದ್ದೇ ಅಸಲಿಯತ್ತು ಗೊತ್ತಾಗಿದೆ. ಅದೇನು ಅಂತೀರಾ.. ಇಲ್ಲಿದೆ ನೋಡಿ.. ಅಸಲಿ ಕಹಾನಿ..
ಇಂತಹ ಅಪರೂಪದ ಪ್ರಕರಣವನ್ನ ಬೇಧಿಸುವಲ್ಲಿ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.