Posts Slider

Karnataka Voice

Latest Kannada News

ಕಬ್ಬೇನೂರಿನ ಡೊಂಕಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ..!

1 min read
Spread the love

ಧಾರವಾಡ: ತಾಲೂಕಿನ ಕಬ್ಬೇನೂರು ಗ್ರಾಮದ ಡೊಂಕಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಕಬ್ಬೇನೂರು ಗ್ರಾಮದ ಯಲ್ಲನಗೌಡ ಈರನಗೌಡ ಭರಮನಗೌಡರ ಎಂಬ 36 ವರ್ಷದ ಯುವಕನೇ ಹಳ್ಳದ ನೀರಿನಲ್ಲಿ ಮಂಗಳವಾರ ಕೊಚ್ಚಿಕೊಂಡು ಹೋಗಿದ್ದರು. ತದನಂತರ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಬುಧವಾರ ಯುವಕನ ಶವ ದೊರಕಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *