ಆಟವಾಡುತ್ತೇನೆಂದು ಹೋದ ಮಗ ಮನೆಗೆ ಮರಳಲಿಲ್ಲ…!
1 min readಹುಬ್ಬಳ್ಳಿ: ಆಟವಾಡಿ ಮನೆಗೆ ಬರುತ್ತೇನೆ ಎಂದು ಹೋದ ಮಗ ಮತ್ತೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆಂದು ಮನೆಯವರಿಗೆ ಗೊತ್ತಾಗಿದ್ದು, ಬೆಳಿಗ್ಗೆ ಕೆರೆಯಲ್ಲಿ ಬಾಲಕ ಹೆಣವಾಗಿ ಸಿಕ್ಕಾಗ.
ಹೌದು.. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಯಲ್ಲಪ್ಪ ಗಾಣಗೇರ ಎಂಬಾತನೇ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದು, ಬೆಳಗಿನ ಜಾವ ಗೊತ್ತಾಗಿದೆ.
ಗೆಳೆಯರೊಂದಿಗೆ ಆಟವಾಡಿ ಮರಳಿ ಬರುತ್ತೇನೆ ಎಂದು ಹೊರಟು ಹೋದ ಯಲ್ಲಪ್ಪ ತಡರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಊರಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಕಾಣದಿದ್ದಾಗ ಇಡೀ ರಾತ್ರಿ ಕಂಡ ಕಂಡಲ್ಲಿ ನೋಡತೊಡಗಿದ್ದಾರೆ. ಆದರೂ ಎಲ್ಲಿಯೂ ಕಂಡು ಬಂದಿಲ್ಲ.
ಬೆಳಗಿನ ಜಾವ ಗ್ರಾಮದ ಕೆರೆಯಲ್ಲಿ ಶವವಾಗಿ ಬಾಲಕ ದೊರಕಿದ್ದು, ಕುಟುಂಬದರ ಕಣ್ಣೀರು ಗೋಡಿಯಾಗಿ ಹರಿದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.