Posts Slider

Karnataka Voice

Latest Kannada News

ಒಂದಾಗಿ ಹೋದರು.. ಹೆಣವಾಗಿ ನಾಲ್ಕು ದಿಕ್ಕಿಗೆ ಸಿಕ್ಕರು.. ವಿಧಿಯಾಟ ತಡೆಯೋಕೆ ಸಾಧ್ಯಾನಾ..?

1 min read
Spread the love

ಉಡುಪಿ: ಉಪಜೀವನಕ್ಕಾಗಿ ಈಗಷ್ಟೇ ಜಿಗುರಿದ್ದ ವ್ಯಾಪಾರಕ್ಕಾಗಿ ಸಮುದ್ರಕ್ಕೆ ಇಳಿದು ಮೀನು ಹಿಡಿಯಲು ಹೋದ ನಾಲ್ವರೂ ಹೆಣವಾಗಿ ಪತ್ತೆಯಾಗಿದ್ದು, ಮೀನುಗಾರರಲ್ಲಿ ಆತಂಕ ಮೂಡಿಸಿದೆ.


ಕಳೆದ ಭಾನುವಾರ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡಲು ಹೋಗಿದ್ದ ನಾಗರಾಜ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥನ ಶವಗಳು ಬೇರೆ ಬೇರೆ ಪ್ರದೇಶದಲ್ಲಿ ದೊರಕಿದ್ದು, ದೋಣಿ ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿರುವುದು ಖಚಿತಗೊಂಡಿದೆ.


ಕೊಡೇರಿ ದೋಣಿ ದುರಂತವಾದ ನಂತರ ಸತತವಾಗಿ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ ಸೇರಿಕೊಂಡು ಕಾರ್ಯಾಚರಣೆ ನಡೆಸಿತ್ತು. ಮಂಜುನಾಥನ ಶವ ಗಂಗೆಬೈಲು ಪ್ರದೇಶದಲ್ಲಿ ದೊರಕಿದ್ದರೇ ಕೊಡೆರಿಯ ದಕ್ಷಿಣ ಭಾಗದಲ್ಲಿ ಲಕ್ಷ್ಮಣ ಖಾರ್ವಿಯ ಶವ ದೊರಕಿತ್ತು.


ಭಾನುವಾರ ಹೋಗಿದ್ದ ದೋಣಿ ಬಂಡೆಗೆ ಅಪ್ಪಳಿಸಿ ಈ ದುರ್ಘಟನೆ ನಡೆದಿದೆ ಎಂಬ ವದಂತಿ ಸತ್ಯವಾಗಿ ಮಾರ್ಪಟ್ಟಿದೆ.


Spread the love

Leave a Reply

Your email address will not be published. Required fields are marked *