Posts Slider

Karnataka Voice

Latest Kannada News

ಗೊತ್ತಾಗ್ತಿದ್ದಕ್ಕೆ ರುದ್ರಭೂಮಿಯಲ್ಲಿ ‘ಶವ’ ಹೂಳಿಸಿದ್ದ ಪೊಲೀಸರು: ಹುಬ್ಬಳ್ಳಿಯಲ್ಲಿ “ಹೊರತೆಗೆದು” ಖಬರಸ್ಥಾನಗೆ ಶಿಫ್ಟ್….

1 min read
Spread the love

ಹುಬ್ಬಳ್ಳಿ: ನಗರದ ಉಣಕಲ್ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದ ಶವದ ವಾರಸುದಾರರು ತಕ್ಷಣವೇ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಶವವನ್ನ ರುದ್ರಭೂಮಿಯಲ್ಲಿ ಹೂಳಿಸಿದ್ದು, ಅದನ್ನೀಗ ಹೊರತೆಗೆದು ಖಬರಸ್ಥಾನಕ್ಕೆ ಶಿಪ್ಟ್ ಮಾಡಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಪೆಂಡಾರಗಲ್ಲಿ ಮುಜಪರ ಕಲಾದಗಿ ಎಂಬಾತ ಮನೆಯಿಂದ ನಾಪತ್ತೆಯಾಗಿದ್ದ. ಆತನೇ ಉಣಕಲ್ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದ. ಆದರೆ, ಈ ವಿಷಯ ಪೊಲೀಸರಿಗೆ ಗೊತ್ತಾಗದ ಹಿನ್ನೆಲೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಬಿಡನಾಳದ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಿಸಿದ್ದರು.

ಮುಜಪರನ ತಂದೆ ವಿದ್ಯಾನಗರ ಪೊಲೀಸ್ ಠಾಣೆಗೆ ಬಂದು ತಮ್ಮ ಮಗನೇ ಆತ ಎಂದು ಕನ್ ಫರ್ಮ್ ಮಾಡಿದ್ದರು. ಅದೇ ಕಾರಣಕ್ಕೆ ಶವವನ್ನ ರುದ್ರಭೂಮಿಯಿಂದ ತೆಗೆಸಿ, ಕೊಡುವಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶವವನ್ನ ಎಸಿ ತೆಲಗಿ ಅವರ ಸಮ್ಮುಖದಲ್ಲಿ ಹೊರತೆಗೆದು, ಸಾವಿಗೀಡಾದವರ ಪಾಲಕರಿಗೆ ಹಸ್ತಾಂತರ ಮಾಡಲಾಯಿತು.

ಸುಮಾರು ಒಂದು ಗಂಟೆಯವರೆಗೆ ಹೆಚ್ಚುವರಿ ಪೊಲೀಸರನ್ನ ಬಂದೋಬಸ್ತ್ ಮಾಡಿಸಿ, ಶವವನ್ನ ಖಬರಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.


Spread the love

Leave a Reply

Your email address will not be published. Required fields are marked *