Posts Slider

Karnataka Voice

Latest Kannada News

ಲೋಕಾಯುಕ್ತರ ಬಲೆಗೆ “ಡಿಡಿಪಿಐ & ಕ್ಲರ್ಕ”- 7 ಸಾವಿರ ವ್ಯೂಹ…

1 min read
Spread the love

ನಿವೃತ್ತ ಶಿಕ್ಷಕನಿಗೆ ಹಣದ ಬೇಡಿಕೆಯಿಟ್ಟಿದ್ದ ಡಿಡಿಪಿಐ

ಉರ್ದು ಶಾಲೆಯ ಶಿಕ್ಷಕನಿಂದ ಲೋಕಾಯುಕ್ತಕ್ಕೆ ದೂರು

ಹಾವೇರಿ: ನಿವೃತ್ತ ಶಿಕ್ಷಕನಿಂದ ಹಣದ ಬೇಡಿಕೆಯಿಟ್ಟಿದ್ದ ಡಿಡಿಪಿಐ ಹಾಗೂ ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ನಗರದಲ್ಲಿ ನಡೆದಿದೆ.

DDPI

ಡಿಡಿಪಿಐ ಅಂದಾನಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ರಟ್ಟಿಹಳ್ಳಿಯ ಸರ್ಕಾರಿ ಉರ್ದು ಶಾಲೆಯ ನಿವೃತ್ತ ಶಿಕ್ಷಕ ಮಹಮ್ಮದ್ ಗೌಸ್ ಅವರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆದಿದೆ.

ನಿವೃತ್ತಿ ವೇತನ ಸೌಲಭ್ಯ ಪಡೆಯಲು ಸಲ್ಲಿಸುವ ಪೈಲ್‌ನ್ನು ಎಜೆ ಆಫೀಸ್‌ಗೆ ಕಳಿಸಲು ಲಂಚಕ್ಕೆ ಬೇಡಿಕೆಯಿಡಲಾಗಿತ್ತು. ಈ ಸಂಬಂಧ 7 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಟ್ರ್ಯಾಪ್ ಆಗಿದ್ದಾರೆ.

ದ್ವೀತಿಯ ದರ್ಜೆ ಸಹಾಯಕ

ಡಿಡಿಪಿಐ ಅವರ ಗದಗ ಹಾಗೂ ಹಾವೇರಿ ನಿವಾಸದಲ್ಲಿ ಮುಂದುವರೆದ ಪರಿಶೀಲನೆ ಮುಂದುವರೆದಿದ್ದು, ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *