ಡಿಸಿಪಿ ರಾಮರಾಜನ್ ಜೊತೆ ರಾಜಣ್ಣಾ ಕೊರವಿ ತೂ… ತೂ… ಮೈ… ಮೈ….
1 min readಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶವಾದ ಚೆನ್ನಮ್ಮ ವೃತ್ತದಲ್ಲಿ ಲಾಕ್ ಡೌನ್ ಬಂದೋಬಸ್ತನಲ್ಲಿ ತೊಡಗಿದ್ದ ಡಿಸಿಪಿ ಕೆ.ರಾಮರಾಜನ್ ಅವರು, ಕಾರುಗಳನ್ನ ತಪಾಸಣೆ ಮಾಡುತ್ತಿದ್ದಾಗ ಭಾರತೀಯ ಜನತಾ ಪಕ್ಷದ ಮುಖಂಡ ರಾಜಣ್ಣಾ ಕೊರವಿ ಮಾತಿನ ಚಕಮಕಿ ನಡೆಸಿದರು.
ಬಿಜೆಪಿ ಮುಖಂಡ ರಾಜಣ್ಣಾ ಕೊರವಿ, ಡಿಸಿಪಿಗೆ ಏರು ಧ್ವನಿಯಲ್ಲಿ ಮಾತನಾಡತೊಡಗಿದರು. ನೀವೂ ಹೊಲಕ್ಕೆ ಬನ್ನಿ ಎನ್ನತೊಡಗಿದರು. ಇದರಿಂದ ಮತ್ತಷ್ಟು ಗೊಂದಲ ಸೃಷ್ಠಿಯಾಯಿತು. ತಡ ಮಾಡದೇ ಡಿಸಿಪಿಯವರು ಕಾನೂನು ಎಲ್ಲರಿಗೂ ಒಂದೇ. ಇವರಿಗೆ ಮೊದಲು ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.
ದಕ್ಷ ಐಪಿಎಸ್ ಅಧಿಕಾರಿ ರಾಮರಾಜನ್, ನಿಯಮ ಪಾಲನೆ ಮಾಡಿದ್ದೆ ತಪ್ಪಾ ಎನ್ನುವಂತೆ ಘಟನೆ ನಡೆಯಿತು.