ಲಿಮೀಟ್ ಮಿರಿದ್ರೇ ಯಾರೇ ಇದ್ರೂ ಸುಮ್ಮನಿರೋಕ್ಕಾಗಲ್ಲ: ಹು-ಧಾ ಡಿಸಿಪಿ ಯಾರಿಗೆ ವಾರ್ನಿಂಗ್ ಕೊಟ್ರೂ ಗೊತ್ತಾ…!?

ಹುಬ್ಬಳ್ಳಿ: ಎಲ್ಲದಕ್ಕೂ ಒಂದೇ ಲಿಮೀಟ್ ಇದೆ. ಅದನ್ನ ಯಾರೇ ಕ್ರಾಸ್ ಮಾಡಿದ್ರೂ ಸುಮ್ಮನೆ ಇರೋ ಪ್ರಶ್ನೆ ಇಲ್ಲಾ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಡಿಸಿಪಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಮುಖಂಡ ರಾಜಣ್ಣ ಕೊರವಿ ಅವರು ನಡೆದುಕೊಂಡ ರೀತಿಯ ಬಗ್ಗೆ ಪ್ರಶ್ನಿಸಿದಾಗ, ನಾವೂ ಬಹಳಷ್ಟು ಸಲ ತಾಳ್ಮೆಯಿಂದ ವರ್ತನೆ ಮಾಡುತ್ತೇವೆ. ನನಗೆ ಸೆಕ್ಯುರಿಟಿಯವರು ವಾದಿಸುತ್ತಾರೆ, ಅವರಂತೆ ನಾನು ಮಾಡೋಕೆ ಆಗತ್ತಾ ಎಂದು ಮರುಪ್ರಶ್ನಿಸಿದರು.
ಸಂಪೂರ್ಣ ಮಾತನಾಡಿದ್ದು ಇಲ್ಲಿದೆ ನೋಡಿ..
ಅವಳಿನಗರದಲ್ಲಿ ಕೆಲವು 353 ಪ್ರಕರಣಗಳು ದಾಖಲಾಗಿವೆ. ನಮ್ಮ ಲಿಮೀಟ್ ಮೀರಿದ ಮೇಲೆ ಪ್ರಕರಣ ದಾಖಲು ಮಾಡಲಾಗುವುದೆಂದು ನೇರವಾಗಿ ಡಿಸಿಪಿ ರಾಮರಾಜನ್, ಕಾನೂನು ಮೀರಿ ನಡೆಯುವವರಿಗೆ ಎಚ್ಚರಿಕೆ ನೀಡಿದರು.