Posts Slider

Karnataka Voice

Latest Kannada News

Spread the love

ಹುಬ್ಬಳ್ಳಿ: ವಾಣಿಜ್ಯನಗರಿಗೊಬ್ಬರು ದಕ್ಷ ಅಧಿಕಾರಿಯ ಆಗಮನವಾಗಿದೆ. ಅದು ಪ್ರತಿದಿನವೂ ಕಾಣತೊಡಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೇ ಇದ್ದರೂ ಕೂಡಾ ಅಂಜದೇ ಅಳುಕದೇ, ಕಾನೂನಿನ ಕ್ರಮವನ್ನ ಜರುಗಿಸುತ್ತಿದ್ದಾರೆ. ಅವರೇ ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ ಡಿಸಿಪಿ ಕೆ.ರಾಮರಾಜನ್.

ಹೌದು.. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಬಂದೋಬಸ್ತ್ ನಡೆಸುತ್ತಿರುವ ಡಿಸಿಪಿ ರಾಮರಾಜನ್, ಕಾನೂನು ಉಲ್ಲಂಘನೆ ಮಾಡಿದ ಯಾರನ್ನೂ ಬಿಡುತ್ತಿಲ್ಲ. ಮೊನ್ನೆ ಬಿಜೆಪಿ ಮುಖಂಡ ರಾಜಣ್ಣ ಕೊರವಿಯವರಿಂದ ಶುರುವಾದ ದಂಡ ಹಾಕುವ ಪ್ರಕ್ರಿಯೆ ಇಂದಿಗೂ ಮುಂದುವರೆದಿದೆ.

ವೀಡಿಯೋ ಇಲ್ಲಿದೆ ನೋಡಿ..

ಕರ್ತವ್ಯವಿಲ್ಲದ ಕಾರಣ ಬೇರೆ ಕೆಲಸಕ್ಕೆ ಹೋಗಿದ್ದ ಕಮರಿಪೇಟೆಯ ಪೊಲೀಸ್ ಪೇದೆ ಸುರೇಶ ವಡ್ಡರ, ಹೆಲ್ಮೇಟ್ ಹಾಕದ ಹಿನ್ನೆಲೆಯಲ್ಲಿ ದಂಡ ಕಟ್ಟಿಸಿದರು. ಮಹಾನಗರ ಪಾಲಿಕೆಯ ಕಾರ್ಮಿಕನಿಗೂ ಕಾನೂನು ಕ್ರಮ ಜರುಗಿಸಿದರು. ಅಷ್ಟೇ ಅಲ್ಲ, ಬಿಎಸ್ಎಫ್ ಯೋಧನಿಗೂ ಕಾನೂನು ಒಂದೇ ಎನ್ನುವುದನ್ನ ತೋರಿಸಿಕೊಟ್ಟರು. ಇದಕ್ಕೆ ಕಳಶವಿಟ್ಟಂತೆ ಪ್ರೆಸ್ ಹೆಸರಿನಲ್ಲಿ ತಿರುಗುತ್ತಿದ್ದ ವ್ಯಕ್ತಿಯೂ ಡಿಸಿಪಿ ರಾಮರಾಜನ್ ತಪರಾಕಿ ಬೀಸಿದರು.

ದಕ್ಷ ಅಧಿಕಾರಿ ರಾಮರಾಜನ್ ಥರದವರು ಹುಬ್ಬಳ್ಳಿಗೆ ಅವಶ್ಯವಿದೆ. ಅದನ್ನ ರಾಜಕಾರಣಿಗಳು ಅರಿತುಕೊಳ್ಳಬೇಕಿದೆ.


Spread the love

Leave a Reply

Your email address will not be published. Required fields are marked *