Posts Slider

Karnataka Voice

Latest Kannada News

ಸಂಗೋಳ್ಳಿ ರಾಯಣ್ಣನ ಕಾಲೇಜಿಗೂ-ಹುಬ್ಬಳ್ಳಿ ಗಾಂಜಾ ಕೇಸಿಗೂ ಸಂಬಂಧವೇನು: ಡಿಸಿಪಿ ಹೇಳ್ತಾರೆ

1 min read
Spread the love

ಹುಬ್ಬಳ್ಳಿ: ಅವಳಿನಗರದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ ಸರಬರಾಜು ಮಾಡುತ್ತಿದ್ದ ಪ್ರಕರಣವನ್ನ ಉಪನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದೇ ತಡ, ಹಲವು ವಿಷಯಗಳು ಬಹಿರಂಗವಾಗತೊಡಗಿವೆ. ಅದರಲ್ಲಿ ಪ್ರಮುಖವಾಗಿದ್ದು, ಮಾರಾಟ ಮಾಡುತ್ತಿರುವುದು ಕೂಡಾ ವಿದ್ಯಾರ್ಥಿಗಳೇ ಎಂಬುದು ಆತಂಕಕಾರಿ ಬೆಳವಣಿಗೆ.

ಉಪನಗರ ಠಾಣೆ ಪೊಲೀಸರ ಕಾರ್ಯಕ್ಷಮತೆಯಿಂದ ಸಿಕ್ಕಿಕೊಂಡಿರುವ ಗಾಂಜಾ ಆರೋಪಿಗಳಿಂದ 5 ಕೆಜಿ 100 ಗ್ರಾಂ ವಶಕ್ಕೆ ಪಡೆಯಲಾಗಿದೆ. ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಇಬ್ಬರು ಅರೆಸ್ಟ್ ಆಗಿದ್ದಾರೆ, ಕೂಡಾ. ಆದರೆ, ಅಚ್ಚರಿ ಬೀಳುವ ಸಂಗತಿಯಂದರೇ, ಇದರಲ್ಲಿರುವ ಪ್ರಮುಖ ಆರೋಪಿ ಗದಗನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿಯಂತೆ. ಅದನ್ನ ಡಿಸಿಪಿ ಕೃಷ್ಣಕಾಂತರವೇ ಹೇಳ್ತಾರೆ ಕೇಳಿ.

 

ಈಗ ಪ್ರಕರಣದ ಬೇರೆ ಮಜಲನ್ನ ಪೊಲೀಸರು ತನಿಖೆ ಮಾಡಬೇಕಿದೆ. ಈ ವಿದ್ಯಾರ್ಥಿ ಯಾವ ಯಾವ ಕಾಲೇಜಿನ ಬಳಿ ಯಾರಿಗೆ ಕೊಡುತ್ತಿದ್ದರೆಂಬುದನ್ನ ಪತ್ತೆ ಹಚ್ಚಿದ್ರೇ ಮಾತ್ರ, ಹುಬ್ಬಳ್ಳಿಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರತ್ತೆ.


Spread the love

Leave a Reply

Your email address will not be published. Required fields are marked *

You may have missed