Posts Slider

Karnataka Voice

Latest Kannada News

ವಿಕಲಚೇತನರಿಗೆ ಕೋವಿಡ್ ಲಸಿಕೆ: ಧಾರವಾಡ ಜಿಲ್ಲಾಡಳಿತ ನಿರ್ಧಾರ…!

Spread the love

ಹುಬ್ಬಳ್ಳಿ: ಸರ್ಕಾರದ ನಿರ್ದೇಶನದ ಮೇರೆಗೆ ವಿಕಲಚೇತನರನ್ನು ಆದ್ಯತೆ ಗುಂಪು ಎಂದು ಪರಿಗಣಿಸಿ ಧಾರವಾಡ ಜಿಲ್ಲಾಡಳಿತದಿಂದ ಲಸಿಕಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.

ಇಂದು ಹುಬ್ಬಳ್ಳಿಯ ಮನೋವಿಕಾಸ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮನೋವಿಕಾಸ ಸಂಸ್ಥೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿಮ್ಸ್ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ, ಆಯೋಜಿಸಿದ್ದ ಲಸಿಕಾ ಅಭಿಯಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್ ಉದ್ಘಾಟಿಸಿದರು‌. ನಂತರ ಮಾತನಾಡಿದ ಅವರು ವಿಕಲಚೇತನರಿಗೆ ಆದ್ಯತೆ ಮೇರೆಗೆ ಕೊವಿಡ್ ಲಸಿಕೆಯನ್ನು ಹಾಕುತ್ತಿದ್ದು 18 ವರ್ಷ ಮೇಲ್ಪಟ್ಟ ವಿಕಲಚೇತನರು ಇದರ ಉಪಯೋಗವನ್ನು ಪಡೆಯಬೇಕೆಂದು ಹೇಳಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ಡಿ.ಎ.ನ್ ಮೂಲಿಮನ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 23,055 ವಿಕಲಚೇತನರನ್ನು ಗುರುತಿಸಲಾಗಿದೆ. ಈಗಾಗಲೇ 5200 ವಿಕಲಚೇತನರಿಗೆ ಕೊವಿಡ್ ಲಸಿಕೆಯನ್ನು ನೀಡಲಾಗಿದೆ. ಇದರೊಂದಿಗೆ 172 ವಿಕಲಚೇತನರ ಆರೈಕೆದಾರರಿಗೆ ಕೊವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದಿನಕರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಿತ್ತಲಮನಿ, ಡಾ.ಸುನಿಲ್ ಗೋಖಲೆ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಸ್.ಎಮ್.ಹೊನಕೇರಿ, ಮನೋವಿಕಾಸ ಸಂಸ್ಥೆ ಮುಖ್ಯಸ್ಥ ಡಾ.ಜೆ.ಕೆ ಹಿರೆಮಠ , ಶಿಶು ಅಭಿವೃದ್ಧಿ ಅಧಿಕಾರಿಗಳಾದ ಡಾ.ಕಮಲಾ, ಡಾ.ನೀಲಾ ಕಾಶಿನ್ ಕುಂಟೆ, ಪಿ.ಎಲ್.ವಿ ಸದಸ್ಯರಾದ ಅಶೋಕ ಕೋರಿ, ನಾಗರಾಜ ಹೂಗಾರ, ಧಾರವಾಡ ಜಿಲ್ಲಾ ವಿಕಲಚೇತನರ ಅಧ್ಯಕ್ಷ ಕೇಶವ ತೆಲಗು, ಶುಶ್ರೂಷಕ ಸಿಬ್ಬಂದಿ ಲಲಿತಾ ಸಿಂಧೆ, ಫಾರ್ಮಾಸಿಸ್ಟ ಉಸುಮಾ ಕರಡಿ, ಅಕ್ಷತಾ ಚೆನ್ನಾಪೂರ ಮತ್ತು ತಾಲೂಕು ವಿವಿಧೋದ್ದೇಶ ಪುನವರ್ಸಸತಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *