ಮದುವೆ-ಮುಂಜ್ವಿಗೆ ಪಾಸ್ ತೆಗೆದುಕೊಂಡ್ರೇ ಪಾಸ್.. ಇಲ್ಲದಿದ್ದರೇ ಬೀಳತ್ತೆ ದಂಡ…!
1 min readಧಾರವಾಡ: ಜಿಲ್ಲೆಯಲ್ಲಿ ಮದುವೆಯೂ ಸೇರಿದಂತೆ ಇನ್ನುಳಿದ ಇತರೆ ಕಾರ್ಯಕ್ರಮಗಳಿಗೆ ಪಾಸ್ ಪಡೆದುಕೊಂಡು ನಡೆಸಬೇಕೆಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಇಂದು ಆದೇಶ ಹೊರಡಿಸಿದ್ದಾರೆ.
ಗೃಹ ಸಚಿವ, ಕಂದಾಯ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಆದೇಶವನ್ನ ಹೊರಡಿಸಿದ್ದಾರೆ.
ಕಾರ್ಯಕ್ರಮ ನಡೆಸುವ ಮುನ್ನ ಪೊಲೀಸರಿಂದ ನಿರಪೇಕ್ಷಣಾ ಪತ್ರವನ್ನ ಪಡೆದ ನಂತರವೇ ಪಾಸ್ ವಿತರಿಸಬೇಕೆಂದು ಹೇಳಲಾಗಿದೆ. ಪಾಸ್ ಇಲ್ಲದೇ ಮದುವೆ ಸೇರಿದಂತೆ ಸಭೆ ಸಮಾರಂಭಗಳನ್ನ ನಡೆಸಿದರೇ ಅಂಥವರ ವಿರುದ್ಧ ಶಿಸ್ತು ಕ್ರಮವನ್ನ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶವನ್ನ ನೀಡಿದ್ದಾರೆ.