ಬೈರಿ’ದೇವರ’ಕೊಪ್ಪದ “ಆ ಸ್ಥಾನ” ತೆರವು..!? ಭಗವಂತ, ಅಲ್ಹಾ, ಜೀಸ್ಸ್ಸೇ ನೋಡಿಕೊಳ್ಳಲಿ…
1 min readಹುಬ್ಬಳ್ಳಿ: ನಗರಕ್ಕಂಟಿರುವ ಬೈರಿದೇವರಕೊಪ್ಪದ ಬಳಿಯ ದರ್ಗಾವನ್ನ ತೆರವುಗೊಳಿಸಲು ಜಿಲ್ಲಾಡಳಿತ ನ್ಯಾಯಾಲಯದ ಆದೇಶದ ಮೂಲಕ ಮುಂದಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ದರ್ಗಾ ತೆಗೆಯುವ ಹಿಂದಿನ ಉದ್ದೇಶದ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹಾಗೂ ಹುಬ್ಬಳ್ಳಿ-ಧಾರವಾಡ 74 ಕ್ಷೇತ್ರದ ಮುಖಂಡ ನಾಗರಾಜ ಗೌರಿ ಮಾತನಾಡಿದ್ದು ಇಲ್ಲಿದೆ ನೋಡಿ.
ಚುನಾವಣೆಯ ಮುನ್ನ ಒಂದು ಕೋಮಿನವರ ವಿರುದ್ಧ ಮಾಡಿ, ಮತ್ತೊಂದು ಕೋಮಿನವರನ್ನ ಸೆಳೆಯುವ ತಂತ್ರವಿದು. ಬೇರೆ ಧರ್ಮದ ದೇವಸ್ಥಾನ ಉಳಿಸಿಕೊಳ್ಳುವ ಇವರಿಗೆ ದರ್ಗಾದ ಮೇಲೆ ಅಷ್ಟೊಂದು… ಏನಿದೇಯೋ ಅಂತಾರೆ ಮುಖಂಡರು.
ದರ್ಗಾದ ಬಳಿ ಈಗಾಗಲೇ ಹೆಚ್ಚುವರಿ ಪೊಲೀಸರನ್ನ ನೇಮಕ ಮಾಡಲಾಗಿದ್ದು, ಬೇರೆ ಜಿಲ್ಲೆಗಳಿಂದಲೂ ಪೊಲೀಸರು ಆಗಮಿಸುವ ನಿರೀಕ್ಷೆಯಿದೆ. ಬೆಳಗಿನ ಜಾವ ದರ್ಗಾ ತೆರವು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.