Posts Slider

Karnataka Voice

Latest Kannada News

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ “ನಕಲಿ ಆಧಾರ” ಲಿಂಕ್: ಹೆಬ್ಬಳ್ಳಿಯಲ್ಲಿ ಪತ್ತೆ…!

Spread the love

ಧಾರವಾಡ: ಬಾಂಬೆ ಮೂಲದ ನಕಲಿ ಐಡಿಯಿಂದ ಆಧಾರ ಲಿಂಕ್ ಮಾಡುತ್ತಿದ್ದ ಸೇವಾ ಕೇಂದ್ರದ ಮೇಲೆ ದಾಳಿ ಮಾಡಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆಧಾರ್ ಕನ್ಸಲ್ಟಂಟ್ ಅಧಿಕಾರಿಗಳು, ನಕಲಿ ಆಧಾರ್ ಲಿಂಕ್ ಮಾಡುತ್ತಿದ್ದ ಯಂತ್ರವನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಬ್ಬಳ್ಳಿ ಗ್ರಾಮದ ವಾಸುದೇವ ಚೈತನ್ಯ CSC ಡಿಜಿಟಲ್ ಸೇವಾ ಕೇಂದ್ರದ ಮೇಲೆ ದಾಳಿ ಮಾಡಿರುವ ಆಧಾರ ಕನ್ಸಲ್ಟಂಟ್ ಅಧಿಕಾರಿ ರುದ್ರೇಶ, ನಕಲಿ ಯಂತ್ರವನ್ನ ವಶಕ್ಕೆ ಪಡೆದು UDIಗೆ ದೂರು ನೀಡಿದ್ದು, ತನಿಖೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಬಾಂಬೆ ಮೂಲದ ಐಡಿಯನ್ನಿಟ್ಟುಕೊಂಡು ಗ್ರಾಮೀಣ ಪ್ರದೇಶದ ಜನರ ಆಧಾರ ಕಾರ್ಡನಲ್ಲಿನ ಹೆಸರು ಬದಲಾವಣೆ, ಮೊಬೈಲ್ ನಂಬರ ಲಿಂಕ್ ಸೇರಿದಂತೆ ಹಲವು ಬದಲಾವಣೆಗಳನ್ನ  ಮಾಡುತ್ತಿದ್ದ ವಾಸುದೇವ ಸುರಕೋಡ ಎಂಬುವವರೇ, ನಕಲಿ ಯಂತ್ರದ ಸೂತ್ರದಾರರೆಂದು ಅಧಿಕಾರಿ ರುದ್ರೇಶ ಮಾಹಿತಿ ನೀಡಿದ್ದಾರೆ.

ಆಧಾರ ಕಾರ್ಡ್ ಮಾಹಿತಿ ಸೋರಿಕೆಯಾಗದಂತೆ ತಡೆಯಬೇಕಾದ ಜಾಗದಲ್ಲಿ ಮಾಡದೇ, ತಮ್ಮ ಖಾಸಗಿ ಸ್ಥಳದಲ್ಲಿ ಫೇಕ್ ಐಡಿಯೊಂದಿಗೆ ಮಾಡುತ್ತಿದ್ದರೆಂದು ಮೇಲ್ ನೋಟಕ್ಕೆ ಗೊತ್ತಾಗಿದೆ ಎಂದು ರುದ್ರೇಶ ಹೇಳಿದ್ದಾರೆ.

ಧಾರವಾಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವ ಕೃತ್ಯ ಇದಾಗಿದ್ದು, ಬಾಂಬೆ ಮೂಲದ ಐಡಿಯನ್ನ ಇಲ್ಲಿಗೆ ಕೊಟ್ಟಿದ್ದು ಯಾರು. ಇದರ ಹಿಂದೆಯಿರುವ ಷಢ್ಯಂತ್ರವೇನು ಎಂಬುದರ ಸಂಪೂರ್ಣವಾದ ತನಿಖೆಯನ್ನ ಯುಐಡಿ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ರುದ್ರೇಶ ಅವರು ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *