ಶಿಕ್ಷಕರಿಗೆ ಬರಸಿಡಿಲು: ಓರ್ವ ಸಿಆರ್ ಪಿ- ಇನ್ನೋಬ್ಬ ಶಿಕ್ಷಕ ಕೊರೋನಾಗೆ ಬಲಿ
1 min readರಾಯಚೂರು/ಮಂಡ್ಯ: ಕೊರೋನಾ ಸಮಯದಲ್ಲಿ ಶಿಕ್ಷಕರಿಗೆ ಆತಂಕ ಮೂಡಿಸುವ ಘಟನೆಗಳು ನಡೆಯುತ್ತಿದ್ದು ಇಂದು ಕೂಡಾ ಶಿಕ್ಷಕರೋರ್ವರು ಮತ್ತು ಸಿಆರ್ ಪಿ ಒಬ್ಬರು ಕೊರೋನಾದಿಂದ ಸಾವಿಗೀಡಾಗಿದ್ದು, ಶಿಕ್ಷಕ ವಲಯದಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ.
ರಾಯಚೂರು ಜಿಲ್ಲೆಯ ಗಾಂಧಿನಗರ-ಮಸ್ಕಿ ತಾಲೂಕಿನ ಸರಕಾರಿ ಕಿರಿಯ ಶಾಲೆ ಶಿಕ್ಷಕ ಶೇಖರಪ್ಪ ಹಿರೇಗೌಡರ ಸಾವಿಗೀಡಾಗಿದ್ದಾರೆ. ಮದ್ದೂರು ತಾಲ್ಲೂಕಿನ ಆಬಲವಾಡಿಯ ನೂತನ crp ಯಾಗಿ ಆಯ್ಕೆಯಾಗಿದ್ದ ಅನಂದಮೂರ್ತಿ ಕೂಡಾ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.
ಪ್ರತಿದಿನವೂ ಒಂದಿಲ್ಲಾ ಒಂದು ಪ್ರದೇಶದಲ್ಲಿ ಶಿಕ್ಷಕರು ಕೊರೋನಾಗೆ ಬಲಿಯಾಗುತ್ತಿದ್ದು, ಶಿಕ್ಷಕ ವಲಯದಲ್ಲಿ ಪ್ರತಿಕ್ಷಣವೂ ಆತಂಕ ಮೂಡಿಸುತ್ತಿದೆ. ಶಿಕ್ಷಣ ಇಲಾಖೆ ಶಿಕ್ಷಕರ ಬಗ್ಗೆ ನಿಖರವಾದ ಮಾಹಿತಿಯನ್ನ ಹೊರಗೆ ಹಾಕಿದ್ರೇ, ಈಗಾಗಲೇ ಹತ್ತಕ್ಕೂ ಹೆಚ್ಚು ಜನರು ಇದೇ ಇಲಾಖೆಯಲ್ಲಿ ಮೃತಪಟ್ಟಂತಾಗಿದೆ.
ಶಿಕ್ಷಕರನ್ನ ಕೊರೋನಾ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು 50 ವಯಸ್ಸಿನ ಮೇಲಿನ ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳು ವಲಯದಲ್ಲಿ ಕೇಳಿ ಬರುತ್ತಿವೆ.