Posts Slider

Karnataka Voice

Latest Kannada News

ಅರೆಸ್ಟ್ ಮಾಡಿ, ಒಳಗೆ ಕಳಿಸಿ, ಕಸ್ಟಡಿಗೆ ಪಡೆದಾಗ ಹೊರಬಿತ್ತು ಸುಲಿಗೆ ಪ್ರಕರಣ…!

Spread the love

ಹುಬ್ಬಳ್ಳಿ: ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ಮಾಡಿಕೊಂಡು, ದರೋಡೆ ಮಾಡಲು ಯತ್ನಿಸಿದ್ದ ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅವರನ್ನೇ ಮತ್ತೆ ಕಸ್ಟಡಿಗೆ ಪಡೆದಾಗ, ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

ಗಬ್ಬೂರು ಬೈಪಾಸ್ ಬಳಿ ರಾಜು ಕುಲಕರ್ಣಿ ಎಂಬುವವರನ್ನ ಬೆದರಿಸಿ 7 ಗ್ರಾಂ ಚಿನ್ನದ ಸರವನ್ನ ಸುಲಿಗೆ ಮಾಡಿದ್ದನ್ನ ಆರೋಪಿಗಳಾದ ದರ್ಶನ ಈರಣ್ಣ ಬಿಜವಾಡ ಹಾಗೂ ಸಂದೀಪ ಸುರೇಶ ಬೆಳ್ಳಿಗಟ್ಟಿ, ಕಸ್ಟಡಿಗೆ ಪಡೆದು ತನಿಖೆ ಮಾಡಿದಾಗ ಒಪ್ಪಿಕೊಂಡಿದ್ದಾರೆ.

ಚಿನ್ನದ ಸರವನ್ನ ಸುಲಿಗೆ ಮಾಡುವಾಗ ಬಳಕೆ ಮಾಡಿದ ಚಾಕುವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಇದೇ ಆರೋಪಿಗಳಿಂದ ಹಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿತ್ತು.

ಕಸಬಾಪೇಟೆ ಠಾಣೆಯ ಇನ್ಸಪೆಕ್ಟರ್ ರತನಕುಮಾರ ಜಿರಗ್ಯಾಳ ನಡೆಸಿದ ತನಿಖೆಯಲ್ಲಿ ಪ್ರಕರಣ ಬಯಲಿಗೆ ಬಂದಿದೆ.


Spread the love

Leave a Reply

Your email address will not be published. Required fields are marked *