Posts Slider

Karnataka Voice

Latest Kannada News

“ಕ್ರಿಕೆಟ್‌ನಲ್ಲಿ ಮೈಲಿಗಲ್ಲಾ”ಗಲು ಆಯ್ಕೆಯಾದ ಧಾರವಾಡದ “ಸುಜಯ.ಬಿ.ಕೆ”…!!!

1 min read
Spread the love

ಹುಬ್ಬಳ್ಳಿ: ಉದಯೋನ್ಮುಖ ಆಟಗಾರ ಸುಜಯ.ಬಿ.ಕೆ ಕೆಎಸ್‌ಸಿಎ ಧಾರವಾಡ ಜಿಲ್ಲೆಯ ತಂಡದಲ್ಲಿ ಆಯ್ಕೆಯಾಗುವ ಮೂಲಕ ಹೊಸದೊಂದು ಭಾಷ್ಯ ಬರೆದಿದ್ದಾನೆ.

16 ವರ್ಷದ ಒಳಗಿನ ಧಾರವಾಡ ವಿಭಾಗದ ತಂಡದಲ್ಲಿ  ಆಯ್ಕೆಯಾಗಿರುವ ಸುಜಯ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದಾನೆ. ಅಷ್ಟೇ, ಅತ್ಯುತ್ತಮ ಫಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾನೆ. ಸಂದೀಪ ಪೈ ಅವರ ಫಸ್ಟ್ ಕ್ರಿಕೆಟ್ ಅಕಾಡೆಮಿಯ ಆಟಗಾರ, KSCA ದಲ್ಲಿ ಆಯ್ಕೆಯಾಗಿರುವುದು ಉತ್ತಮ ಸಾಧನೆಯಾಗಿದೆ.

 

ಹಲವು ವರ್ಷಗಳಿಂದ ಕ್ರಿಕೆಟ್‌ಗಾಗಿಯೇ ಉಸಿರಾಡುವ ಸುಜಯ, ಬಹುತೇಕ ಪಂದ್ಯಗಳಲ್ಲಿ 50 ಕ್ಲೂ ಹೆಚ್ಚು ರನ್‌ಗಳನ್ನ ಗಳಿಸಿದ್ದಾನೆ. ಈತನ ಆಯ್ಕೆಯಾಗಿರುವುದಕ್ಕೆ ಸಂದೀಪ ಪೈ ಸಂತಸ ವ್ಯಕ್ತಪಡಿಸಿದ್ದಾರೆ.

ಸುಜಯ ಬಿ.ಕೆ. ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಹಾಗೂ ಸುಮಾ ಅವರ ಸುಪುತ್ರನಾಗಿದ್ದಾನೆ.


Spread the love

Leave a Reply

Your email address will not be published. Required fields are marked *