ನಗು ಸೂಸಿ, ಬಲಗಣ್ಣು ಹೊಡೆದು, ಲೋಚಕ್ಕ ಅಂತಾ ಮುತ್ತಿನ ಶಬ್ಧ ಹೊರಡಿಸಿದ್ರಾ ಸಿಪಿಐ ಮಂಜುನಾಥ ಕುಸುಗಲ್….!!

ಧಾರವಾಡ: ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳ ಅಂಕಿ ಅಂಶ ಪಡೆಯಲು ಬಂದಿದ್ದ ಪ್ಯಾರಾ ಲೀಗಲ್ ಸಿಬ್ಬಂದಿಯೊಬ್ಬರ ಜೊತೆ ಅನುಚಿತವಾಗಿ ಧಾರವಾಡ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕರು ವರ್ತಿಸಿದ್ದಾರೆಂದು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣದಿಂದ ಪೊಲೀಸ್ ಇಲಾಖೆಯಲ್ಲಿನ ಮನಸ್ಥಿತಿ ಹೇಗಾಗುತ್ತಿದೆ ಎಂಬ ಪ್ರಶ್ನೆ ಮೂಡಿದೆ. ಸಿಪಿಐ ಮಂಜುನಾಥ ಕುಸುಗಲ್ ಅವರನ್ನ ಅಮಾನತ್ತು ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರಿಗೆ ವಕೀಲರು ಆಗ್ರಹಿಸಿದ್ದಾರೆ.
ಈ ಹಿಂದೆ ಹುಬ್ಬಳ್ಳಿ ನವನಗರದ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರು ವಕೀಲರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆಂದು ವಕೀಲರು ಹೋರಾಟ ಮಾಡಿದ್ದರು. ಅವರನ್ನ ತಕ್ಷಣವೇ ಠಾಣೆಯಿಂದ ತೆಗೆಯಲಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.