Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ನಾಳೆಯಿಂದ ಕೋವಿಶಿಲ್ಡ್ ಲಸಿಕಾರಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ

Spread the love

ಧಾರವಾಡ: ಜಿಲ್ಲೆಯಲ್ಲಿ ನಾಳೆ(ಮೇ.10)ಯಿಂದ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನವರಿಗೆ ಕೋವಿಶಿಲ್ಡ್ ಲಸಿಕೆ ಹಾಕಲಾಗುತ್ತದೆ. ಆಸಕ್ತ  ಪಲಾನುಭವಿಗಳು ಆರೋಗ್ಯ ಸೇತುಆ್ಯಪ್ ದಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,‌ರಾಜ್ಯ ಸರಕಾರವು ನಾಳೆಯಿಂದ ಕೋವಿಶಿಲ್ಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನ ಪಲಾನುಭವಿಗಳಿಗೆ ನೀಡಲು ಆದೇಶಿಸಿದೆ.

ಸರಕಾರದ ಆದೇಶದಂತೆ ಧಾರವಾಡ ಜಿಲ್ಲಾಡಳಿತದಿಂದ,   ಧಾರವಾಡ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಾಗೂ ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಕೂಕಾ ಆಸ್ಪತ್ರೆಗಳಲ್ಲಿ ‌ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ‌.  ಪ್ರತಿ ಲಸಿಕಾ ಕೇಂದ್ರದಲ್ಲಿ ಪ್ರತಿ ದಿನ 150 ಜನ ಪಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷದೊಳಗಿನ ಪಲಾನುಭವಿಗಳಿಗೆ ಲಸಿಕಾರಣಕ್ಕೆ ನಾಳೆ ಮಧ್ಯಾಹ್ನ 3 ಗಂಟೆಗೆ ಧಾರವಾಡ ಜಿಲ್ಲಾಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗಳಲ್ಲಿ ಚಾಲನೆ‌ನೀಡಲಾಗುವುದು.

 ಮತ್ತು  ಕಲಘಟಗಿ, ಕುಂದಗೋಳ ನವಲಗುಂದ ತಾಲೂಕಾ ಆಸ್ಪತ್ರೆಗಳಲ್ಲಿ ಮೇ. 11 ರ  ಮಂಗಳವಾರದಿಂದ ನೋಂದಾಯಿತ ಪಲಾನುಭವಿಗಳಿಗೆ ಲಸಿಕಾರಣ ಆರಂಭಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಅರ್ಹ ಪಲಾನುಭವಿಗಳು ಆರೋಗ್ಯಸೇತು ಆ್ಯಪ್ ದಲ್ಲಿ ನೋಂದಣಿ ಮಾಡಿಕೊಳ್ಳಬೇಕು.   ಮೊಬೈಲ್ ಬಳಸಿ, ಆನ್ ಲೈನ್ ಮೂಲಕ ಆರೋಗ್ಯ ಸೇತು ಆ್ಯಪ್ ದಲ್ಲಿ ನೋಂದಣಿ ಮಾಡಿಕೊಂಡ ಪಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲಿ ಸ್ಪಾಟ್ ರಜಿಸ್ಟ್ರೇಶನ್ ಇರುವದಿಲ್ಲ. ಆದ್ದರಿಂದ ನೋಂದಾಯಿತ ಪಲಾನುಭವಿಗಳು ಲಸಿಕಾಕರಣಕ್ಕೆ‌ ನಿಗದಿಗೊಳಿಸಿರುವ ಆಸ್ಪತ್ರೆಗಳಿಗೆ ತೆರಳಿ, ಲಸಿಕೆಯನ್ನು ಪಡೆದುಕೋಳ್ಳಬಹುದು ಎಂದು‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *