Posts Slider

Karnataka Voice

Latest Kannada News

ಬಿಜೆಪಿ ಶಾಸಕರ ಕುತಂತ್ರ ಮೀಸಲಾತಿ ಪಟ್ಟಿಯಲ್ಲಿದೆ: ಇಸ್ಮಾಯಿಲ ತಮಾಟಗಾರ ಆರೋಪ…!

Spread the love

ಧಾರವಾಡ:  ರೋಮ ಸಾಮ್ರಾಜ್ಯ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಾ ಕುಳಿತಿದ್ದನಂತೆ. ದೇಶದಲ್ಲಿ ಅದರಲ್ಲೂ ರಾಜ್ಯದಲ್ಲಿ ಜನ ರಸ್ತೆ ರಸ್ತೆಯಲ್ಲಿ ಸಾಯುತ್ತಿರುವಾಗ ಜನರ ಬದುಕಿಗೆ ಮಹತ್ವ ಕೊಡದೆ ಅಧಿಕಾರದ ಹಪಾಹಪಿಗೆ ಬಿಜೆಪಿ ನಾಯಕರು ನಿಂತಿರುವುದು ಅಕ್ಷಮ್ಯ ಅಪರಾಧ ಎಂದು ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಾಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ– ಧಾರವಾಡ ಪಾಲಿಕೆಯ ವಾರ್ಡ್‌ ವಿಂಗಡನೆ ಹಾಗೂ ಮೀಸಲಾತಿ ಎರಡೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಅವರು, ನಿಯಮಾವಳಿಗಳನ್ನು ಗಾಳಿಗೆ ತೂರಿ, ತಮ್ಮ ಮನಸೋ ಇಚ್ಚೆ ಮೀಸಲಾತಿ ಮಾಡಲಾಗಿದೆ. ಲಾಕ್‌ಡೌನ್‌ ಇರುವ ಈ ಪರಿಸ್ಥಿತಿಯಲ್ಲಿ ತರಾತುರಿಯಲ್ಲಿ ಪ್ರಕಟಿಸುವುದು ಚುನಾವಣೆಗೆ ಸಜ್ಜಾಗುವುದು ಅಗತ್ಯವಿತ್ತೇ ಎಂದು  ಪ್ರಶ್ನಿಸಿದ್ದಾರೆ.

ಪಾಲಿಕೆಯ ವಾರ್ಡ್ ಮೀಸಲಾತಿ ಪ್ರಕಟಿಸುವಾಗ ಆಯಾ ವಾರ್ಡ್‌ಗಳ ಜನಸಂಖ್ಯೆ ಆಧಾರದ ಮೇಲೆ ಮಾಡಬೇಕಿತ್ತು. ಆದರೆ, ಎಸ್ಟಿ ಜನಸಂಖ್ಯೆ ಹೆಚ್ಚು ಇದ್ದಲ್ಲಿ ಬೇರೆ ಮೀಸಲಾತಿ ಮಾಡಲಾಗಿದೆ. ಎಸ್ಟಿ ಜನಸಂಖ್ಯೆ ಕಡಿಮೆ ಇದ್ದಲ್ಲಿ ಎಸ್ಟಿ ಮೀಸಲಾತಿ ಮಾಡಲಾಗಿದೆ.

ಅವಳಿನಗರದ ಬಿಜೆಪಿ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಆಯಾಕಟ್ಟಿನ ಜಾಗದಲ್ಲಿ ಅನುಕೂಲವಾಗುವಂತೆ ವಾರ್ಡ್ ಮೀಸಲಾತಿ ಮಾಡಿಸಿದ್ದು, ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ತೀವ್ರ ಅನ್ಯಾಯವಾಗಿದೆ. ಹೀಗಾಗಿ ರಾಜ್ಯದ ಬಿಜೆಪಿ ಸರಕಾರ ತಕ್ಷಣ ಈ ವಾರ್ಡ್ ಮೀಸಲಾತಿಯನ್ನು ತಡೆಹಿಡಿಯಬೇಕು. ವಾತಾವರಣ ಸರಿ ಹೋದ ಮತ್ತೊಮ್ಮೆ ಪರಿಶೀಲಿಸಿ, ಜನಾಭಿಪ್ರಾಯ ಪಡೆದು ಹೊಸದಾಗಿ ಮೀಸಲಾತಿ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೀಸಲಾತಿ, ವಾರ್ಡ್‌ ವಿಂಗಡನೆ ಕೈಬಿಡದಿದ್ದರೆ ಬಿಜೆಪಿ ನಾಯಕರ ಕುತಂತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ,

ಕಾಂಗ್ರೆಸ್‌ ಮುಖಂಡರ ಸರಳವಾಗಿ ಆಯ್ಕೆಯಾಗುವ ವಾರ್ಡ್‌ಗಳನ್ನು ವಿಂಗಡಿಸಿ ಅಲ್ಲಿ ಕಾಂಗ್ರೆಸ್‌ ನಾಯಕರು ಸ್ಪರ್ಧಿಸದಂತೆ ಮೀಸಲಾತಿ ಪ್ರಕಟಿಸಿ ಅವರನ್ನು ನೇರವಾಗಿ ಹತ್ತಿಕ್ಕುವ ತಂತ್ರ ಮಾಡುತ್ತಿದೆ. ಇದು ಬಿಜೆಪಿಯ ದ್ವೇಷದ ರಾಜಕಾರಣದ ಮುಖವನ್ನು ಬಯಲು ಮಾಡುವಂತಿದೆ ಎಂದು ಇಸ್ಮಾಯಿಲ್‌ ಆರೋಪಿಸಿದ್ದಾರೆ.


Spread the love

Leave a Reply

Your email address will not be published. Required fields are marked *