Posts Slider

Karnataka Voice

Latest Kannada News

ಮಹಾನಗರ ಪಾಲಿಕೆ ವೈದ್ಯಾಧಿಕಾರಿಯಿಂದಲೇ ಲೈಗಿಂಕ ಕಿರುಕುಳ

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ  ವೈದ್ಯಾಧಿಕಾರಿ ಮೇಲೆ ಲೈಂಗಿಕ ಆರೋಪ ಬಂದಿದ್ದು, ಫಾರ್ಮಾಸಿಟಿಕಲ್ ಏಜೆನ್ಸಿ ಮಹಿಳೆಯೊಬ್ಬಳು ದೂರು ನೀಡಿದ್ದು ರಾತ್ರೋರಾತ್ರಿ ಪಾಲಿಕೆ ವೈದ್ಯಾಧಿಕಾರಿಯನ್ನ ಬಂಧನ ಮಾಡಲಾಗಿದೆ.

ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮೇಲೆ ಲೈಂಗಿಕ ಆರೋಪ ಬಂದಿದ್ದು, ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿ ವಿತರಿಸುತ್ತಿದ್ದ ಮಹಿಳೆಗೆ ಬಿಲ್ ಕೊಡುವ ಸಂಬಂಧ ಅಸಭ್ಯವಾಗಿ ವರ್ತನೆ ಮಾಡಿದ್ದು, ಈ ಸಂಬಂಧ ಮಹಿಳೆಯ ಸಂಬಂಧಿಕರು ಚಿಟಗುಪ್ಪಿ ಆಸ್ಪತ್ರೆಗೆ ತೆರಳಿ ಡಾ.ಬಿರಾದಾರಗೆ ತದುಕುವ ಪ್ರಯತ್ನ ಮಾಡಿದ್ರು.

ತಾಯಿ ಫಾರ್ಮಾಸಿಟಿಕಲ್ ಏಜೆನ್ಸಿ ಮುಖ್ಯಸ್ಥೆ ಸಾವಿತ್ರಿ ಪ್ರಶಾಂತ, ಸಾಮಗ್ರಿ ವಿತರಿಸಿದ್ದ ಬಿಲ್ ಕೇಳಲು ಹೋದಾಗ ಲಾಡ್ಜಗೆ ಕರೆದರಂತೆ. ಅಷ್ಟೇ ಅಲ್ಲ, ಈ ಹಿಂದೆನೂ ಲೈಂಗಿಕವಾಗಿ ಕಿರುಕುಳ ಕೊಡುವ ಪ್ರಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರಕರಣ ನಡೆಯುತ್ತಿದಂತೆ ಚಿಟಗುಪ್ಪಿ ಆಸ್ಪತ್ರೆಗೆ ಆಗಮಿಸಿ ಡಾ.ಪ್ರಭು ಬಿರಾದಾರನ್ನ ಪೊಲೀಸರು ಕರೆದುಕೊಂಡು ಹೋದರು. ಇದಾದ ನಂತರ ಉಪನಗರ ಠಾಣೆಗೆ ಪೊಲೀಸ್ ಆಯುಕ್ತ ಆರ್.ದಿಲೀಪ, ಡಿಸಿಪಿ ಕೃಷ್ಣಕಾಂತ ಆಗಮಿಸಿ, ಪ್ರಕರಣದ ಬಗ್ಗೆ ಮಾಹಿತಿ ಪಡೆದರು.


Spread the love

Leave a Reply

Your email address will not be published. Required fields are marked *

You may have missed