Posts Slider

Karnataka Voice

Latest Kannada News

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇಯ ಅಲೆಯ ಅಟ್ಟಹಾಸ ಆರಂಭವಾಗಿದ್ದು, ಇದರಿಂದ ಶಿಕ್ಷಣ ಇಲಾಖೆಯಲ್ಲಿ ಹಲವರು ಸಾವಿಗೀಡಾಗಿದ್ದು, ತಮಗೆಲ್ಲ ಗೊತ್ತೆಯಿದೆ. ಆದರೆ, ಒಂದೇ ವರ್ಷದಲ್ಲಿ ಬರೋಬ್ಬರಿ 268 ಶಿಕ್ಷಕರು ಸಾವಿಗೀಡಾಗಿರುವ ಮಾಹಿತಿ ಹೊರ ಬಿದ್ದಿದೆ.

ಬೆಂಗಳೂರೊಂದರಲ್ಲೇ 81 ಶಿಕ್ಷಕರು, ಕಲಬುರಗಿಯಲ್ಲಿ 70, ವಿಜಯಪುರದಲ್ಲಿ 56, ಮೈಸೂರು 51 ಸೇರಿದಂತೆ ಇನ್ನುಳಿದ ಬೆಳಗಾವಿ, ಧಾರವಾಡ ಜಿಲ್ಲೆಯೂ ಸೇರಿದಂತೆ 51 ಶಿಕ್ಷಕರು ಸಾವಿಗೀಡಾಗಿದ್ದಾರೆ.

ಇದರಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ 183 ಶಿಕ್ಷಕರು, ಅನುದಾನಿತ 13, ಸರಕಾರಿ ಪ್ರೌಢಶಾಲೆಯ 49 ಹಾಗೂ ಅನುದಾನಿತ 19 ಶಿಕ್ಷಕರು ಸಾವಿಗೀಡಾಗಿದ್ದಾರೆ. ಸಿಬ್ಬಂದಿಗಳ ಪೈಕಿ 14 ಸರಕಾರಿ, ಮೂವರು ಅನುದಾನಿತ ಶಾಲೆಯವರು ಮೃತಪಟ್ಟಿದ್ದಾರೆ.

ಶಿಕ್ಷಣ ಇಲಾಖೆ ಇದೇ ಕಾರಣಕ್ಕೆ ನಲುಗಿ ಹೋಗಿದ್ದು, ಶಿಕ್ಷಕ ಸಮೂಹ ಆತಂಕದಲ್ಲಿದೆ. ಆದರೆ, ಭಯ ಬೀಳದೇ ಇರುವುದನ್ನ ಶಿಕ್ಷಕರು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆಯಿದೆ.


Spread the love

Leave a Reply

Your email address will not be published. Required fields are marked *