Posts Slider

Karnataka Voice

Latest Kannada News

ಶಿಕ್ಷಕ ಸಮುದಾಯದಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ: ಮತ್ತೆ ಆರು ಶಿಕ್ಷಕರು ಇನ್ನಿಲ್ಲ…!

Spread the love

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಶಿಕ್ಷಕ ಸಮುದಾಯವೂ ತಲ್ಲಣಗೊಂಡಿದೆ. ಇದಕ್ಕೆ ಕಾರಣವಾಗಿದ್ದು, ಪ್ರತಿ ದಿನವೂ ಹಲವು ಶಿಕ್ಷಕರು ಬಲಿಯಾಗುತ್ತಿರುವುದು.

ಶಿಕ್ಷಕರು ಕೂಡಾ ಕೊರೋನಾ ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿಯೇ ಚಿಕಿತ್ಸೆ ಫಲಿಸದೇ ಸಾವಿಗೀಡಾಗುತ್ತಿದ್ದಾರೆ.  ರಾಯಭಾಗದ ವಿಜ್ಞಾನ ಶಿಕ್ಷಕ ಮುತ್ತಣ್ಣ ಕೋಟಿಯವರು ಚಿಕ್ಕ ವಯಸ್ಸಿನಲ್ಲಿಯೇ ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಸದಾಶಿವನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಐ.ಎ.ಪಡೆನ್ನವರ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಕಳೆದ ನಾಲ್ಕು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.

ವಿಜಯಪುರ ಗ್ರಾಮೀಣ ಭಾಗದ ಹಿಟ್ಟಿನಹಳ್ಳಿ ಗ್ರಾಮದ ಎಸ್.ಎಸ್.ಸಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕ ರಾಜು ದೊಡ್ಡಮನಿ ಅವರು ಕೂಡಾ ಕೋವಿಡ್-19ಗೆ ಇನ್ನಿಲ್ಲವಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವಾನಂದ ಕಂಬಾರ, ಕೊರೋನಾಗೆ ಬಲಿಯಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕ ಹನಮಂತ ಸಾವುಕಾರ ಎಂಬುವವರು ಕೂಡಾ ಕಡಿಮೆ ವಯಸ್ಸಿನಲ್ಲಿಯೇ ಕೊರೋನಾದಿಂದ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಮೃತ ಶಿಕ್ಷಕರ ಆತ್ಮಕ್ಕೆ ಶಾಂತಿ ಕೋರುವ ಜೊತೆಗೆ ಆ ಕುಟುಂಬಗಳಿಗೆ ಇವರಿಲ್ಲದ ನೋವನ್ನ ಭರಿಸುವಂತ ಶಕ್ತಿಯನ್ನ ಭಗವಂತ ನೀಡಲಿ ಎಂದು ಶಿಕ್ಷಕ ಸಮೂಹ ಪ್ರಾರ್ಥಿಸಿದೆ.


Spread the love

Leave a Reply

Your email address will not be published. Required fields are marked *