Posts Slider

Karnataka Voice

Latest Kannada News

ಪಾಸಿಟಿವ್‌ನಿಂದ ಹೊರ ಬಂದವರಿಗೆ ಹೂಮಳೆ- ಪೊಲೀಸ್ ಠಾಣೆಯಲ್ಲಿ ಅದೇಷ್ಟು ಗೌರವ ಸಿಗ್ತಿದೆ ಗೊತ್ತಾ…? Exclusive video

1 min read
Spread the love

ಧಾರವಾಡ: ಕಳೆದ ಐದು ತಿಂಗಳಿಂದ ನಿರಂತರವಾಗಿ ಕೊರೋನಾ ವಿರುದ್ಧ ಹೋರಾಟ ಮಾಡುತ್ತಲೇ ಸೇವೆ ಸಲ್ಲಿಸುತ್ತಿದ್ದವರಿಗೆ ಕೋವಿಡ್-19 ಅಂಟಿಕೊಂಡಿತ್ತು. ಅದರಿಂದ ಕ್ಷೇಮವಾಗಿ ಹೊರಗೆ ಬಂದವರಿಗೆ ಇನ್ನುಳಿದ ಸಹೋದ್ಯೋಗಿಗಳು ಆಧಾರದಿಂದ ನೋಡಿಕೊಳ್ಳುತ್ತಿದ್ದಾರೆ.


ಧಾರವಾಡ ಸಂಚಾರಿ ಠಾಣೆಯ ಹವಾಲ್ದಾರ ಮಂಜುಳಾ ಬಡಿಗೇರ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಬಸವರಾಜ ಡುಂಬರಕೊಪ್ಪ ಕೊರೋನಾ ವೈರಸ್‌ಗೆ ಒಳಗಾಗಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಗುಲಿದ ಈ ರೋಗವನ್ನ ಎದುರಿಸಿ ಬಂದ ಇಬ್ಬರು ಕೊರೋನಾ ವಾರಿಯರ್ಸ್‌ಗಳನ್ನ ಆತ್ಮೀಯವಾಗಿ ಠಾಣೆಗೆ ಬರಮಾಡಿಕೊಳ್ಳಲಾಯಿತು.

ಠಾಣೆಯ ಇನ್ಸ್‌ಪೆಕ್ಟರ್ ಮಲ್ಲನಗೌಡ ನಾಯ್ಕರ್ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಶಾಲು ಹಾಕಿ ಸತ್ಕರಿಸಿದರು. ಇದರ ಜೊತೆಗೆ ಅವರಿರ್ವರ ಮೇಲೆ ಹೂಗಳನ್ನ ಎಸೆದು ಕರ್ತವ್ಯಕ್ಕೆ ಬರಮಾಡಿಕೊಂಡರು.


Spread the love

Leave a Reply

Your email address will not be published. Required fields are marked *