ಹುಬ್ಬಳ್ಳಿ-ಧಾರವಾಡ ಜನರೇ ನಾಳೆಯಿಂದ ಹೆಂಗಿರಬೇಕು ಗೊತ್ತಾ: ಡಿಸಿಪಿ ಮಾತಾಡಿದ್ದಾರೆ ನೋಡಿ…!

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನ ಪೊಲೀಸರು ಜರುಗಿಸಲು ಮುಂದಾಗಿದ್ದು, ಅದಕ್ಕಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿಯನ್ನೂ ನೀಡಿದ್ದು, ಕರ್ನಾಟಕವಾಯ್ಸ್.ಕಾಂ ನಿಮ್ಮ ಮುಂದಿಡುತ್ತಿದೆ.
ವೀಡಿಯೋ ಇಲ್ಲಿದೆ..
ಯಾವುದೇ ಕಾರಣಕ್ಕೂ ಬೈಕ್ ಗಳ ಮೇಲೆ ಸಂಚರಿಸುವ ಹಾಗಿಲ್ಲವೆಂಬುದನ್ನ ಖಡಾಖಂಡಿತವಾಗಿ ಡಿಸಿಪಿ ಹೇಳಿದ್ದಾರೆ. ಇದರಿಂದ ವಿನಾಕಾರಣ ವಾಹನ ತೆಗೆಯುವ ಸವಾರರಿಗೆ ಬಿಸಿ ಮುಟ್ಟಿದೆ. ನಿಯಮ ಉಲ್ಲಂಘಟನೆ ಮಾಡಿದವರ ವಾಹನಗಳನ್ನ ಜಪ್ತಿ ಮಾಡಲಾಗುವುದೆಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮಾಹಿತಿ ಇಲ್ಲಿದೆ ನೋಡಿ..
ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಲಾಕ್ ಡೌನ್ ಕುರಿತಂತೆ ಕೆಳಗಿನಂತೆ ನಿರ್ದೇಶನ ನೀಡಿರುತ್ತಾರೆ.
೧.ಯಾವುದೇ ದ್ವಿಚಕ್ರ ವಾಹನಗಳು ಸೇರಿದಂತೆ ಪ್ರಯಾಣಿಕರ ವಾಹನಗಳ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
೨.ಬೆಳಿಗ್ಗೆ 6- 10 ಅಗತ್ಯ ವಸ್ತುಗಳ ದಿನಸಿ ತರಕಾರಿ ಅಂಗಡಿಗಳು ತೆರೆಯಲು ಅವಕಾಶವಿದೆ. ಆದರೆ ಸಾರ್ವಜನಿಕರು ನಡೆದು ಹೋಗಿ ಖರೀದಿ ಮಾಡಬೇಕು. ವಾಹನಗಳಲ್ಲಿ ಹೋಗುವಂತಿಲ್ಲ.
೩.ಅತ್ಯವಶ್ಯಕ ವಸ್ತುಗಳ ಸಾಗಿಸುವ ಗೂಡ್ಸ್ ವಾಹನಗಳ ಓಡಾಟಕ್ಕೆ ಅವಕಾಶವಿದೆ.
೪.ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಹೋಗಲು ವಾಹನ ಅಗತ್ಯವಿದ್ದಲ್ಲಿ ತಹಶಿಲ್ದಾರರ ಕಚೇರಿಯಲ್ಲಿ ಕಡ್ಡಾಯವಾಗಿ ವಾಹನದ ಪಾಸ್ ಪಡೆದು ಓಡಾಡಬೇಕು.ಶೇ೫೦ ಮಾತ್ರ ಪ್ರಯಾಣಕ್ಕೆ ಅವಕಾಶ (ಮಾಲೀಕರು ಸೇರಿ).
೫.ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಪಡೆದ ೪೦ ಜನಕ್ಕೆ ಮಾತ್ರ ಅವಕಾಶ.
೬.ಅಂತರ್ ಜಿಲ್ಲೆ ಓಡಾಟ ಸಂಪೂರ್ಣ ನಿಷೇಧ. ಹೊರ ಜಿಲ್ಲೆ ರಾಜ್ಯದಿಂದ ಬಂದವರ ಮಾಹಿತಿಯನ್ನು ಸಂಗ್ರಹಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗಲು ತಿಳಿಸಬೇಕು.
೭.ತುರ್ತು ಆರೋಗ್ಯ ಸಮಸ್ಯೆ ಇದ್ದಲ್ಲಿ ಪ್ರಯಾಣಿಕರ ವಾಹನದ ಮೂಲಕ ಆಸ್ಪತ್ರೆ ಹೋಗಲು ಅನುಮತಿಸಿದೆ.
೮.ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಳ್ಳುವ ಹೋಗುವರು ರಿಜಿಸ್ಟರೇಶನ್ ಮೆಸೇಜು ತೋರಿಸಬೇಕು.
೯.ತಳ್ಳು ಗಾಡಿ, ಟಂಟಂ ಗೂಡ್ಸ ಮೂಲಕ ತರಕಾರಿ ಮಾರಾಟವನ್ನು ಬೀದಿಗಳಿಗೆ ತೆರಳಿ ಮಾಡಲು ಬೆಳಿಗ್ಗೆ 6 -ಸಂಜೆ 6ವರೆಗೆ ಅವಕಾಶವಿದೆ.
೧೦.ಛತ್ರ ಸಮುದಾಯ ಭವನ,ದೇವಸ್ತಾನದಲ್ಲಿ ಮದುವೆ ನಿಷೇಧಿಸಲಾಗಿದೆ. ಮದುವೆಗೆ ೪೦ ಜನ ಮಿತಿಗೆ ಒಳಪಟ್ಟು ಅವಕಾಶವಿದೆ.
೧೧.ಯಾವುದೆ ಗುಂಪು ಸೇರುವಂತಿಲ್ಲ.
೧೨.ನಿಷೇಧ ಉಲ್ಲಂಘಿಸಿ ಓಡಾಡುವ ವಾಹನಗಳು ಮತ್ತು ಅನಗತ್ಯ ಓಡಾಡುವ ವ್ಯಕ್ತಿಗಳ ಮೇಲೆ FIR/ದಂಡ/ವಾಹನಗಳ ಸೀಜ್ ಮಾಡಲಾಗುತ್ತದೆ.
೧೩.ಶವ ಸಂಸ್ಕಾರಕ್ಕೆ 5 ಜನರ ಮಿತಿ
೧೪.ಹೋಟೆಲ್ ಬಾರ್ ಪಾರಸೆಲ್ ಮಾತ್ರ ಅವಕಾಶ.
೧೫.ಅಗತ್ಯ ಸರ್ಕಾರಿ ಸೇವೆಯಲ್ಲಿ ಇರುವ ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು.