Posts Slider

Karnataka Voice

Latest Kannada News

ಕೊರೋನಾ ರೂಪಾಂತರ ವೈರಾಣು ಭೀತಿ; ಇಂದು ರಾತ್ರಿಯಿಂದಲೇ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ..!

1 min read
Spread the love

ಕೊರೋನಾ ರೂಪಾಂತರ ವೈರಾಣು ಭೀತಿ; ಇಂದು ರಾತ್ರಿಯಿಂದಲೇ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ..

ಬೆಂಗಳೂರು: ಕೊರೊನಾ ರೂಪಾಂತರ ವೈರಾಣು ಭೀತಿಯಿಂದ‌ ಮುಂಜಾಗ್ರತಾ ಕ್ರಮವಾಗಿ ಇಂದು ರಾತ್ರಿಯಿಂದ ಜನವರಿ 2 ರವರೆಗೆ ರಾಜ್ಯಾದ್ಯಂತ ರಾತ್ರಿ 10 ರಿಂದ 2 ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

 

ಕೋವಿಡ್ ಸಲಹಾ ಸಮಿತಿ ಶಿಫಾರಸ್ಸುಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದರು. ನಂತರ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೊಳಿಸುವ ಶಿಫಾರಸ್ಸಿಗೆ ಸಮ್ಮತಿ ನೀಡಿ ಇಂದಿನಿಂದಲೇ ನೈಟ್ ಕರ್ಫ್ಯೂಗೆ ಆದೇಶ ನೀಡಿದರು.

ಸಭೆ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ,
ಕೋವಿಡ್ ಸಲಹಾ ಸಮಿತಿ ಶಿಫಾರಸ್ಸು ಪ್ರಕಾರ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 10 ರ ನಂತರ ಮನೆಯಿಂದ ಹೊರಬರುವಂತಿಲ್ಲ ಆದರೆ ತುರ್ತು ಸೇವೆಗೆ ಮಾತ್ರ ಇದರಿಂದ ವಿನಾಯಿತಿ ಇದೆ ಅನಗತ್ಯವಾಗಿ ಯಾರೂ ರಾತ್ರಿ ಹೊರಗೆ ಬರಬಾರದು, ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನೈಟ್ ಕರ್ಫ್ಯೂಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ನಿಗದಿಯಾಗಿರುವಂತೆ ಶಾಲಾ ಕಾಲೇಜು ಜನವರಿ 1 ರಿಂದ ಆರಂಭವಾಗಲಿದೆ ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಬೆಳವಣಿಗೆ ನೋಡಿ ನಿರ್ಧಾರ ಪರಿಶೀಲನೆ ಮಾಡಲಿದ್ದೇವೆ ಎಂದರು‌

ನಂತರ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್,
ಇಡೀ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ್ದೇವೆ, ಅನಾವಶ್ಯಕ ಸಭೆ ಸೇರುವುದನ್ನ ನಿಷೇಧಿಸಿದ್ದು, ಹೊಸ ವರ್ಷಾಚರಣೆ ಇಲ್ಲ ಎಂದರು.

ಬ್ರಿಟನ್ ಮೂಲದಿಂದ ನವೆಂಬರ್ 25 ರಿಂದ ಇಲ್ಲಿಯವರೆಗೆ ಬಂದಿರುವವರನ್ನು ಕಡ್ಡಾಯವಾಗಿ 28 ದಿನ ನಿಗಾ ಇರಿಸಲಾಗುತ್ತದೆ, ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ. ಈಗಾಗಲೇ ಬಂದು 14 ದಿನ ಆಗಿದ್ದರೆ ಅವರಿಗೆ ಅವರೇ ಸ್ವಯಂ 21 ದಿನ ನಿಗಾ ಇರಿಸಿಕೊಳ್ಳಬೇಕು, 14 ದಿನದಿಂದ ಈಗ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಿದೆ. ರೋಗಲಕ್ಷಣ ಇರುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತದೆ ಎಂದರು.

14 ಸಾವಿರ ಜನ ಬ್ರಿಟನ್ ನಿಂದ ಬಂದಿದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದರು,ಆದರೆ ನಮ್ಮ ಸರ್ಕಾರಕ್ಕೆ ಸಾವು, ಸೋಂಕಿತರ ಸಂಖ್ಯೆ,ವಿದೇಶಿ ಪ್ರಯಾಣಿಕರ ಸಂಖ್ಯೆ ಮರೆಮಾಚಿ ಯಾವ ಸಾಧನೆ ಮಾಡುವ ಪ್ರಮೇಯ ಇಲ್ಲ, ಸಂಖ್ಯೆ ಮರೆಮಾಚುವುದು ಏನೂ ಇಲ್ಲ, ಹೇಳಿಕೆ‌ ಕೊಡುವಾಗ ಸರಿಯಾಗಿ ಮಾಹಿತಿ ಕಲೆಹಾಕಿ ಎಂದು ತಿರುಗೇಟು ನೀಡಿದರು.

2500 ಜನರು ಇಲ್ಲಿಯವರೆಗ ಬಂದಿದ್ದಾರೆ ಎಎಡೇ ವಿಮಾನ ಮಾತ್ರ ದಿನ ನಿತ್ಯ ಸಂಚಾರ ಮಾಡಿವ, ಏರ್ ಇಂಡಿಯಾ, ಬ್ರಿಡೀಷ್ ಏರ್ ವೇಸ್ ಎರಡು ವಿಮಾನ ಮಾತ್ರ ಸಂಚಾರ ಮಾಡಿವೆ.ಬಂದಿರುವ ಪ್ರಯಾಣಿಕರ ಮಾಹಿತಿ ಇದೆ ಎಲ್ಲರ ತಪಾಸಣೆ ಮಾಡಲಿದ್ದೇವೆ ಎಂದರು.

ಎಸ್ ಜೀನ್ ಮಾಡುವ ವ್ಯವಸ್ಥೆ ಬೆಂಳೂರಿನಲ್ಲಿ ನಾಲ್ಕು ಕಡೆ ಇದೆ.ಎನ್ ಸಿಬಿಎಸ್, ನಿಮ್ಹಾನ್ಸ್, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಜನೆಟಿಕ್ ಸೀಕ್ವೆನ್ಸ್ ಪರೀಕ್ಷ ನಡೆಯಲಿದೆ ಎಂದು.

ಕೊರೊನಾ ಪಾಸಿಟಿವ್ ಬಂದವರಿಗೆ ಮಾತ್ರ ಜನೆಟಿಕ್ ತಪಾಸಣೆ.ಮಾಡಲಾಗುತ್ತದೆ ಜೀನ್ ಸೀಲ್ವೆನ್ಸ್ ಪರೀಕ್ಷೆ ಉಚಿತವಾಗಿ ಮಾಡಲಿದ್ದೇವೆ ಎಂದರು.


Spread the love

Leave a Reply

Your email address will not be published. Required fields are marked *