Posts Slider

Karnataka Voice

Latest Kannada News

ಏನ್ ಆಗಲಿ ಮುಂದೆ ಮುಂದೆ ಸಾಗು ನೀ: ಕೊರೋನಾ ಸೋಂಕಿತರ ನೆಮ್ಮದಿಗಾಗಿ ಗಾನ-ಬಜಾನಾ- ಜಿಲ್ಲಾಧಿಕಾರಿ ವಿನೂತನ ಪ್ರಯತ್ನ

1 min read
Spread the love

ಹುಬ್ಬಳ್ಳಿ: ಕೊರೋನಾ ಸೋಂಕಿತರ ಮಾನಸಿಕ ನೆಮ್ಮದಿಯನ್ನ ಹೆಚ್ಚಿಸಲು ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಆ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಕೊರೋನಾ ಪೀಡಿತರು ಹಸನ್ಮುಖಿಗಳಾಗಿ ಖುಷಿಯಿಂದ ಸಮಯ ಕಳೆಯುವಂತಾಗಿದೆ. ಅದ್ಹೆಂಗೆ ಅಂತೀರಾ ಕಂಪ್ಲೀಟ್ ಸ್ಟೋರಿ ಓದಿ..

ಘಂಟಿಕೇರಿಯ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿರುವ ಲಕ್ಷಣರಹಿತ ಕೋವಿಡ್ ಸೋಂಕಿತರು ಕರೋಕೆ ರಾಗಕ್ಕೆ ಹಾಡು ಹಾಡಿ ಮನರಂಜನೆ ಪಡೆದರು.
ಮಹಿಳೆಯರು ಏನಾಗಲಿ ಮುಂದೆ ಸಾಗು ನೀ.. ಬಯಸಿದ್ದೇಲ್ಲ ಸಿಗದು ಬಾಳಲಿ ಎಂದು ಹಾಡುತ್ತಿದ್ದರೇ ಇನ್ನುಳಿದವರು ಚಪ್ಪಾಳೆ ತಟ್ಟುತ್ತ ಅವರೊಂದಿಗೆ ಹಾಡಿದರು. ತಮ್ಮ ತಮ್ಮಲ್ಲೇ ಹುಮ್ಮಸ್ಸು ತುಂಬಿಸುವ ಪ್ರಯತ್ನ ಮಾಡಿದರು.
ಕೆಲವರು ಪುನೀತ ರಾಜಕುಮಾರ ಅಭಿನಯದ ರಾಜಕುಮಾರ ಸಿನೇಮಾದ ಟೈಟಲ್ ಸಾಂಗ್ ಹಾಡುವ ಮೂಲಕ ಮನರಂಜನೆ ಪಡೆದುಕೊಂಡರು.
ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಸೂಚನೆ ಮೇರೆಗೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಡಾ.ಸಂಪತ್ ಸಿಂಗ್ ಸೇರಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಶುಶ್ರೂಷಕಿಯರು ಈ ಕ್ರಮ ಕೈಗೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿನ ಈ ವಿನೂತನ ಪ್ರಯತ್ನ ಕೊರೋನಾ ಸೋಂಕಿತರ ನೆಮ್ಮದಿಗೆ ಕಾರಣವಾದರೇ ಜಿಲ್ಲಾಧಿಕಾರಿ ನಡುವೆ ನಿತೇಶ ಪಾಟೀಲರ ಐಡಿಯಾ ವರ್ಕೌಟ್ ಆದಂತೆ ಸರಿ.


Spread the love

Leave a Reply

Your email address will not be published. Required fields are marked *