Posts Slider

Karnataka Voice

Latest Kannada News

ಕರೋನಾ.. ಕರೋನಾ.. ಕರೋನಾ.. : ಜೀವ ಭಯದಲ್ಲೇ ಜೀವನ.. !

1 min read
Spread the love

ಧಾರವಾಡ: ಕರೋನಾ ವೈರಸ್ ಜನರ ಜೀವದ ಜೊತೆ ಚೆಲ್ಲಾಟವಾಡುವ ಲಕ್ಷಣಗಳು ಹೆಚ್ಚಾಗುತ್ತಿರುವಾಗಲೇ, ಸಣ್ಣ-ಪುಟ್ಟ ಉಧ್ಯಮಿಗಳ ಸ್ಥಿತಿಯಂತೂ ಹೇಳತೀರದಾಗಿದೆ. ಮಾರುಕಟ್ಟೆಗಳು ಜನರೇ ಇಲ್ಲದೇ ಬಿಕೋ ಎನ್ನುತ್ತಿವೆ. ಇದರಿಂದ ಪ್ರತಿದಿನ ದುಡಿದ ತಿನ್ನುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ಕರೋನಾದ ಎಫೆಕ್ಟ್ ಇಲ್ಲದ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಮುಂದುವರೆದಿದೆ. ದೇವಸ್ಥಾನಗಳಿಗೂ ಜನರು ಬಾರದೇ ಇರುವುದು ಅವರಲ್ಲಿನ ಭಯವನ್ನ ತೋರಿಸುತ್ತಿದೆ. ಈ ರೋಗ ಬರದಂತೆ ಹೇಗೇಲ್ಲಾ ಮುಂಜಾಗೃತೆ ವಹಿಸಬೇಕೆಂದು ಸರಕಾರ ಅನೇಕ ರೀತಿಯಲ್ಲಿ ಹೇಳುತ್ತಲೇ ಇದೆ. ಆದರೂ, ಕೆಲವರು ಭಯದಿಂದ ಮುಕ್ತರಾಗುತ್ತಿಲ್ಲ.

ಕರೋನಾ.. ರಾಜ್ಯದಲ್ಲಿ ಎಷ್ಟು ಜೀವಗಳನ್ನ ಬಲಿ ಪಡೆಯುತ್ತೋ ಗೊತ್ತಿಲ್ಲ, ವ್ಯಾಪಾರ-ವಹಿವಾಟು ಮಾಡುವ ಸಣ್ಣ ಮಟ್ಟದ ವ್ಯಾಪಾರಿಗಳ ಜೀವನವನ್ನ ಮುಗಿಸಿಯೇ ಬಿಡತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ತರಕಾರಿ ಬೆಳೆದ ರೈತರಿಗೂ ಈ ಬಿಸಿ ತಟ್ಟಿದೆ.


Spread the love

Leave a Reply

Your email address will not be published. Required fields are marked *

You may have missed