Karnataka Voice

Latest Kannada News

ಬಡ್ತಿ ಪಡೆದಿದ್ದ ಶಿಕ್ಷಕ ಕೊರೋನಾದಿಂದ ಸಾವು: ದಿನಂಪ್ರತಿ ಓಡಾಟವೇ ಕಾರಣವಾಯಿತಾ..?

Spread the love

ಚಿತ್ರದುರ್ಗ: ಶಿಕ್ಷಣ ಇಲಾಖೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರೋರ್ವರಿಗೆ ಇತ್ತೀಚೆಗಷ್ಟೇ ಪದೋನ್ನತಿ ನೀಡಿ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ನಿರಂತರವಾಗಿ ಓಡಾಟದಿಂದ ಕೊರೋನಾ ಪಾಸಿಟಿವ್ ದೃಢಪಟ್ಟು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸಂಭವಿಸಿದೆ.

ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿದ್ದರು ಕಲೆ, ಸಾಹಿತ್ಯ ಮತ್ತು ನಾಟಕದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಕೆ.ಬಿ.ಪರಮೇಶ್ವರಪ್ಪ ಎಂಬ ಶಿಕ್ಷಕರೇ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.

ಚಿತ್ರದುರ್ಗ ತಾಲೂಕಿನ ವಡ್ಡರಸಿದ್ದವ್ವನಹಳ್ಳಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾಗಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದಾರೆ.

ಪರಮೇಶ್ವರಪ್ಪನವರು, ಚಿತ್ರದುರ್ಗ ತಾಲೂಕಿನ ಮುದ್ದಾಪುರ ಸರಕಾರಿ ಶಾಲೆಯಲ್ಲಿ ಮೊದಲು ನಿರ್ವಹಿಸಿದ್ದರು. ಇತ್ತೀಚೆಗೆ ಪದೋನ್ನತಿ ಹೊಂದಿದ್ದರು. ಮೂಲತಃ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರದವರಾಗಿದ್ದಾರೆ. ಶಿಕ್ಷಕರ ಸಾವಿಗೆ ಶಿಕ್ಷಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.


Spread the love

Leave a Reply

Your email address will not be published. Required fields are marked *