Posts Slider

Karnataka Voice

Latest Kannada News

ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಇನ್ನಿಲ್ಲ..!

1 min read
Spread the love

ಧಾರವಾಡ: ಕೊರೋನಾ ಹೆಚ್ಚಾಗುತ್ತಿರುವ ಸಮಯದಲ್ಲಿಯೇ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಇಂದು ಬೆಳಗಿನ ಜಾವ ವಿಧಿವಶರಾಗಿದ್ದು, ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದ್ದು, ಅಂತಿಮವಾಗಿ ಇನ್ನೂ ಮಾಹಿತಿ ಸಿಗಬೇಕಿದೆ.

ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಡಿವೆಪ್ಪ ತಿಪ್ಪಣ್ಣ ಹಾವನೂರ ಎಂಬ ಶಿಕ್ಷಕರೇ, ಮಿಶ್ರಿಕೋಟಿ ಗ್ರಾಮದಲ್ಲಿ ಸಾವಿಗೀಡಾಗಿದ್ದಾರೆ.

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಿದ್ದರೂ, ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕಿತ್ತು. ಇದೇ ಸಮಯದಲ್ಲಿ ಶಿಕ್ಷಕ ಅಡಿವೆಪ್ಪ ಅವರು ಅನಾರೋಗ್ಯಗೊಂಡಿದ್ದರು. ಮನೆಯಲ್ಲಿಯೇ ಇಂದು ಬೆಳಿಗ್ಗೆ ಸಾವಿಗೀಡಾಗಿದ್ದಾರೆ.

ಸಹಶಿಕ್ಷಕ ಅಡಿವೆಪ್ಪ ಹಾವನೂರ ಅವರ ಸಾವಿನಿಂದ ಶಿಕ್ಷಕ ಬಳಗ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆದಷ್ಟು ಶಿಕ್ಷಕರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಜಾಗೃತೆ ಮೂಡಿಸಬೇಕಾಗಿದೆ.

ಶಿಕ್ಷಕರ ಸಾವಿನ ಬಗ್ಗೆ ಕಲಘಟಗಿ ಗುರುಬಳಗ ಸಂತಾಪ ಸೂಚಿಸಿದ್ದು, ಹಾವನೂರ ಕುಟುಂಬದವರಿಗೆ ಈ ನೋವನ್ನ ಭರಿಸುವ ಶಕ್ತಿಯನ್ನ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


Spread the love

Leave a Reply

Your email address will not be published. Required fields are marked *