Posts Slider

Karnataka Voice

Latest Kannada News

BEO ಸೇರಿ ಹಲವು ಶಿಕ್ಷಕರು ಕೋವಿಡ್ ಗೆ ಬಲಿ…!

Spread the love

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಲ್ಲಿ ಶಿಕ್ಷಣ ಇಲಾಖೆಯ ಹಲವರು ಕೋವಿಡ್ ಗೆ ಬಲಿಯಾಗುತ್ತಿರುವುದು ಮುಂದುವರೆದಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಯೂ ಸೇರಿ ಹಲವು ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಧಾರವಾಡ ತಾಲೂಕಿನ ವೆಂಕಟಾಪುರ ಶಾಲೆಯ ಚಿತ್ರಕಲಾ ಶಿಕ್ಷಕ ಕೊರೋನಾದಿಂದ ಸಾವಿಗೀಡಾಗಿದ್ದು, ಇಂದು ಸಂಜೆ ವೆಬಿನಾರ್ ಮೂಲಕ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಮೃತ ಶಿಕ್ಷಕ ಸಂಜೀವ ಕಾಳೆ ಪ್ರತಿಯೊಬ್ಬರ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು.

ಎಚ್‌ಪಿಎಸ್ ಜಯಕೀರ್ತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಜೈನರ್ ಕೊರೋನಾದಿಂದ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಬಾಸೆಲ್ ಮಿಶನ್ ಪ್ರಾಥಮಿಕ ಶಾಲೆಯ ನಿವೃತ್ತ ಪ್ರಧಾನ ಗುರುಗಳಾದ ರಾಜೇಂದ್ರ ನಾಯ್ಕರ್ ಅವರು ಕೂಡಾ ಕೊರೋನಾದಿಂದ ನಿಧನರಾಗಿದ್ದಾರೆ.

ಖಾನಾಪೂರದ ಶಿಕ್ಷಣ ಸಂಯೋಜಕ ಉಮೇಶ ಬಿರಾದಾರ, ಕೊರೋನಾದಿಂದ ಸಾವಿಗೀಡಾಗಿದ್ದಾರೆ.


Spread the love

Leave a Reply

Your email address will not be published. Required fields are marked *