ಕೊರೋನಾಗೆ ದಕ್ಷ ಬಿಇಓ ಬಲಿ: ಶಿಕ್ಷಣ ಇಲಾಖೆಯಲ್ಲಿ ಆತಂಕ ಮೂಡಿಸಿದ ಸಾವು
1 min readತುಮಕೂರು: ಶಿಕ್ಷಣ ಇಲಾಖೆಯಲ್ಲೂ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದ್ದು, ದಕ್ಷ ಹಾಗೂ ಪ್ರಾಮಾಣಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯೂ ಈ ವೈರಸ್ ನಿಂದ ಸಾವಿಗೀಡಾಗಿದ್ದಾರೆ.
ತುಮಕೂರು ಸಿದ್ಧಗಂಗಾ ಸೂಪರ್ ಸ್ಪೇಷಲಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಕೀರ ಅಲಿಖಾನ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಕಳೆದ ವಾರವಷ್ಟೇ ಇವರ ಸಹೋದರ ಕೂಡಾ ಕೋವಿಡ್-19ನಿಂದಲೇ ಮೃತಪಟ್ಟಿದ್ದರು.
ಸ್ನೇಹ ಜೀವಿಯಾಗಿದ್ದ ಶಾಕೀರ್ ಆಲಿಖಾನ್ ತುಮಕೂರು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ಬೇಲೂರ್ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ 2ವರ್ಷ 6ತಿಂಗಳು ಸೇವೆ ಸಲ್ಲಿಸಿದ್ದರು. ಕಳೆದ 8ತಿಂಗಳಿನಿಂದ ಚಿಕ್ಕಮಂಗಳೂರು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಕಾಲಿಕ ದುರಂತದಿಂದ ಶಿಕ್ಷಣ ಇಲಾಖೆಗೆ ಜವಾಬ್ದಾರಿಯುತವಾದ ಅಧಿಕಾರಿ, ಸೇವೆ ನಿಷ್ಠೆಯನ್ನು ಹೊಂದಿದ್ದ ಹಿರಿಯ ಅಧಿಕಾರಿಯನ್ನು ಕಳೆದು ಕೊಂಡಂತಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಾಕೀರಅಲಿಖಾನರಿಗೆ ಮೂರು ಹೆಣ್ಣು ಮಕ್ಕಳಿದ್ದು, 6ವರ್ಷ, 12 ವರ್ಷ ಹಾಗೂ 17ವರ್ಷ ವಯಸ್ಸಿನವರಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯ ಅಕಾಲಿಕ ನಿಧನಕ್ಕೆ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸೇರಿದಂತೆ ಹಲವು ಸಂಘಗಳು ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.