Posts Slider

Karnataka Voice

Latest Kannada News

ಸಾರ್ವಜನಿಕರಿಗೆ ಬಿಗ್ ರಿಲೀಫ್ ಕೊಟ್ಟ ಕಮೀಷನರ್ ಲಾಬುರಾಮ್…!

Spread the love

ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ಮಹತ್ವವಾದ ಆದೇಶವೊಂದನ್ನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಕಳಿಸಿದ್ದು, ಇದರಿಂದ ಏನಾದರೂ ಕಳೆದುಕೊಂಡು ಪೊಲೀಸ್ ಠಾಣೆಗೆ ಹೋಗುವವರಿಗೆ ಕಿರಿಕಿರಿ ಕಡಿಮೆಯಾಗಲಿದೆ.

ಹೌದು.. ಪೊಲೀಸ್ ಆಯುಕ್ತ ಲಾಬುರಾಮ್ ಅವರು ಅವಳಿನಗರದ ಪ್ರತಿಯೊಂದು ಪೊಲೀಸ್ ಠಾಣೆಗೂ ಆದೇಶವೊಂದನ್ನ ಕಳಿಸಿದ್ದಾರೆ. ಅದರಲ್ಲಿ ಸ್ಪಷ್ಟವಾಗಿ ನಮೂದು ಮಾಡಿ, ನೀವು ಹೀಗೆ ಮಾಡಬೇಕೆಂದು ಸೂಚನೆಯನ್ನೂ ನೀಡಿದ್ದಾರೆ.

ಮೊಬೈಲ್, ಎಟಿಎಂ, ಪ್ಯಾನ್ ಕಾರ್ಡ್, ಪಾಸ್ ಸೇರಿದಂತೆ ಕೆಲವು ವಸ್ತುಗಳು ಕಳೆದುಕೊಂಡಾಗ ಪೊಲೀಸ್ ಠಾಣೆಯಲ್ಲಿ ಅವರಿಗೆ “76ಎ” ಕೊಡಬೇಕಾಗುತ್ತದೆ. ಆದರೆ, ಕಳೆದುಕೊಂಡವರು ಹೋದಾಗ ನೀವು ಬಾಂಡ್ ಪೇಪರಲ್ಲಿ ನೋಟರಿ ಮಾಡಿಸಿ ಅಫಿಡವಿಟ್ ಕೊಡಬೇಕೆಂದು ಪೊಲೀಸರು ಹೇಳಿ ಕಳಿಸುತ್ತಿದ್ದರು. ಆದರೆ, ಅದರ ಅವಶ್ಯಕತೆಯಿಲ್ಲವೆಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಏನಾದರೂ ವಸ್ತುಗಳನ್ನ ಕಳೆದುಕೊಂಡವರಿಂದ ವಿವರವಾದ ಮಾಹಿತಿಯನ್ನ ಪಡೆದು 76ಎ ಕೊಟ್ಟು ಕಳಿಸುವಂತೆಯೂ ಸೂಚನೆ ನೀಡಿದ್ದು, ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.


Spread the love

Leave a Reply

Your email address will not be published. Required fields are marked *

You may have missed